ಸಿಬಿಐ ಕೋರ್ಟಿನಲ್ಲಿ ಅಳುಮುಂಜಿಯಾದ ಗಡ್ಡಧಾರಿ ರೆಡ್ಡಿ

ಇಂತಹ ಪರಿಸ್ಥಿತಿಯಲ್ಲಿ ನಿನ್ನೆ ಕೋರ್ಟ್ ಕಟೆಕಟೆಯಲ್ಲಿದ್ದ ಜನಾ ರೆಡ್ಡಿ ತೀರಾ ಬಳಲಿದಂತೆ ಕಂಡುಬಂದರು. ನ್ಯಾಯಾಧೀಶರು ರೆಡ್ಡಿಗೆ 'ಜೈಲಿಗೆ ನಡಿ' ಎನ್ನುತ್ತಿದ್ದಂತೆ ದುಃಖ ಉಮ್ಮಳಿಸಿಕೊಂಡು ಬಂದು ಅತ್ತೂ ಬಿಟ್ಟರು. ಅದಕ್ಕೂ ಮುನ್ನ ಒಬ್ಬರಾದ ಮೇಲೊಬ್ಬರಂತೆ ಹಿರಿಯ ವಕೀಲರುಗಳ ಕಾಲು ಮುಟ್ಟಿ ಜನಾ ರೆಡ್ಡಿ ನಮಸ್ಕರಿಸುತ್ತಿದ್ದುದೂ ಕಂಡು ಬಂತು.
ತನಿಖೆ ವೇಳೆ ರೆಡ್ಡಿ ಸಹಿಯಿರುವ ದಾಖಲೆ ಪತ್ರಗಳನ್ನು ಸಿಬಿಐ ಅಧಿಕಾರಿಗಳು ತೋರಿಸಿದಾಗ, 'ಅದು ನನ್ನ ಸಹಿಯೇನು? ಏನೋ, ಆ ರೀತಿ ನಾನು ಸಹಿ ಮಾಡಿರುವುದು ಜ್ಞಾಪಕಕ್ಕೆ ಬರುತ್ತಿಲ್ಲ' ಎಂದು ಜನಾ ಜಾಣ ಮರೆವು ಪ್ರದರ್ಶಿಸಿದ್ದಾರೆ. ಇನ್ನು ಹೆಚ್ಚು ವಿಚಾರಣೆಗೊಳಪಡಿಸಿದರೆ 'ನಾಕೇಮಿ ತೆಲಿಯ ಲೇದು' ಎಂದು ರೆಡ್ಡಿ ಸಿಬಿಐ ಎದುರು ವರಾತ ತೆಗೆದಿದ್ದಾರೆ.
ಇದರಿಂದ ಪೀಕಲಾಟಕ್ಕಿಟ್ಟುಕೊಂಡಿರುವ ಸಿಬಿಐ 'ಜನಾರನ್ನು ಇನ್ನಷ್ಟು ವಿಚಾರಣೆಗೊಳಪಡಿಸಬೇಕಾಗಿದೆ. ಇಬ್ಬರನ್ನೂ ಮತ್ತೆ 9 ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕು' ಎಂದು ನ್ಯಾಯಾಲಯಕ್ಕೆ ಮೊರೆಯಿಟ್ಟಿದೆ. ಅದೊಮ್ಮೆ ತಮ್ಮ ಸುಪರ್ದಿಗೆ ಬರುತ್ತಿದ್ದಂತೆ ಮೊದಲು ಜನಾ ರೆಡ್ಡಿಯನ್ನು ಬಳ್ಳಾರಿಗೆ ಕರೆದೊಯ್ದು ಸ್ಥಳ ಮಹಾತ್ಮೆಯಿಂದ ಅವರ ಜ್ಞಾಪಕ ಶಕ್ತಿಯನ್ನು ಮರಳಿಸುವ ಯತ್ನ ನಡೆಸಲಿದೆ ಎಂದು ತಿಳಿದುಬಂದಿದೆ.












Click it and Unblock the Notifications