ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಕುಟುಂಬದ ಮೇಲೆ ಲೋಕಾಯುಕ್ತ ದಾಳಿ

By Mahesh
|
Google Oneindia Kannada News

Lokayukta raid on Yeddyurappa's property
ಬೆಂಗಳೂರು, ಸೆ.20: ಅತ್ತ ಶಿವರಾಜ್ ಪಾಟೀಲರು ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ, ಇತ್ತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಶೇಷಾದ್ರಿಪುರಂನಲ್ಲಿರುವ ಧವಳಗಿರಿ ಪ್ರಾಪರ್ಟಿಸ್, ವಿಜಯನಗರದಲ್ಲಿರುವ ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಅವರ ಮನೆ, ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆ ಕಚೇರಿ ಮೇಲೆ ದಾಳಿ ನಡೆಸಿ, ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ ಪಿ ಮಂಜುನಾಥ್ ಅವರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ದಾಳಿ ಮುಂದುವರೆದಿದ್ದು, ಯಡಿಯೂರಪ್ಪ ಆಪ್ತ ಹೇಮಚಂದ್ರ ಸಾಗರ್ ಅವರ ಮನೆ, ಕಚೇರಿ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ನಂಗೆ ಮೊದಲೇ ಗೊತ್ತಿತ್ತು: ಕೊಪ್ಪಳ ಉಪಚುನಾವಣೆ ಪ್ರಚಾರದ ಬಿಸಿಯಲ್ಲಿರುವ ಯಡಿಯೂರಪ್ಪ ಅವರು ಲೋಕಾಯುಕ್ತ ದಾಳಿಗೆ ಪ್ರತಿಕ್ರಿಯಿಸುತ್ತಾ, 'ನಂಗೆ ದಾಳಿ ನಡೆಯುತ್ತೆ ಎಂದು ನಿನ್ನೆ ದಿವಸವೇ ಗೊತ್ತಾಗಿತ್ತು' ಎಂದು ಹೇಳಿದ್ದಾರೆ.

English summary
Even as Governor accepts justice Shivaraj Patil's resignation, Karnataka Lokayutka police lead by DYSP Girish sleuths raids Dhavala Giri and Sahyadri Health care belonging to ex CM BS Yeddyurappa and his family. Yeddyurappa's son in law Sohan Kumar's house also raided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X