ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಬಂಧನದಿಂದ ಮುಕ್ತಿ ಪಡೆದು ಜೈಲು ಸೇರಿಕೊಂಡ ರೆಡ್ಡಿ

By Srinath
|
Google Oneindia Kannada News

Srinivas Reddy, Janardhan Reddy
ಹೈದರಾಬಾದ್, ಸೆ.19: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐ ಬಂಧನದಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಬಾವ ಶ್ರೀನಿವಾಸ ರೆಡ್ಡಿ ಅವರನ್ನು ಅಕ್ಟೋಬರ್ 3ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಚಂಚಲಗೂಡ ಕೇಂದ್ರ ಕಾರಾಗೃಹಕ್ಕೆ ಇಬ್ಬರೂ ಕೆಲವೇ ಕ್ಷಣಗಳಲ್ಲಿ ಮರಳಲಿದ್ದಾರೆ. ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರಿಗೂ ಸಿಬಿಐನಿಂದ ಮುಕ್ತಿ ನೀಡಿ, ಸೋಮವಾರ ಈ ಆದೇಶ ಹೊರಡಿಸಿದೆ.

ಎರಡು ದಿನಗಳ ಕಾಲ ಶ್ರೀನಿವಾಸ ರೆಡ್ಡಿಯನ್ನು ಬಳ್ಳಾರಿಗೆ ಕರೆದೊಯ್ದಿದ್ದ ಸಿಬಿಐ ಭಾನುವಾರ ರಾತ್ರಿ ಹೈದರಾಬಾದಿಗೆ ವಾಪಸ್ ಕರೆತಂದಿತ್ತು. ಇನ್ನು ಜನಾ ರೆಡ್ಡಿಯನ್ನು ಹೈದರಾಬಾದಿನ ಕೋಠಿ ಪ್ರದೇಶದಲ್ಲಿರುವ ಕಚೇರಿಯಲ್ಲೇ ವಿಚಾರಣೆಗೆ ಗುರಿಪಡಿಸಿತ್ತು. ಸೆ. 5ರಿಂದ ಚಂಚಲಗೂಡ ಜೈಲಿನಲ್ಲಿದ್ದ ಇಬ್ಬರನ್ನೂ ಕಳೆದ ವಾರ (ಸೆ.13) ಸಿಬಿಐ ವಶಕ್ಕೆ ನೀಡಲಾಗಿತ್ತು.

English summary
Gali Janardhan Reddy who was in CBI custody since sept 13, is handed over to Judicial custody as such sent back to Chanchalguda Central Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X