ಯಾದಗಿರಿಯನ್ನು ಗಡಗಡಿಸಿದ ಡಬ್ಬಲ್ ಮರ್ಡರ್!

ಹೆಂಡತಿ ಕಳಿಸದ ಅತ್ತೆಯ ಹತ್ಯೆ : ಸೋಮವಾರ ರಾತ್ರಿ ಶಹಾಪುರ ತಾಲೂಕಿನ ನಾಯ್ಕಲ್ನಲ್ಲಿ ಹೆಂಡತಿಯನ್ನು ತನ್ನೊಂದಿಗೆ ಕಳಿಸದ ಅತ್ತೆಯನ್ನು ಅಳಿಯನೇ ಹತ್ಯೆ ಮಾಡಿದ್ದಾನೆ. ಮರಿಯಮ್ಮ (46) ಕೊಲೆಯಾದ ಮಹಿಳೆ.
ನಾಯ್ಕಲ್ ವಾಸಿಯಾಗಿರುವ ಆರೋಪಿ ಮೈಲಾರಿ ಅದೇ ಗ್ರಾಮದ ಮರಿಯಮ್ಮನ ಮಗಳನ್ನು ಮದುವೆಯಾಗಿದ್ದ. ತವರಿನಲ್ಲಿದ್ದ ಹೆಂಡತಿಯನ್ನು ಮನೆಗೆ ಕರೆದೊಯ್ಯಲು ಬೆಳಿಗ್ಗೆ ಅತ್ತೆ ಮನೆಗೆ ಬಂದಿದ್ದ. ಆಗ ಮಾತಿಗೆ ಮಾತು ಬೆಳೆದು ಸಿಟ್ಟಿನ ಭರದಲ್ಲಿ ಅಲ್ಲಿದ್ದ ಒನಕೆಯಿಂದ ಅತ್ತೆಯ ತಲೆಗೆ ಹೊಡೆದಿದ್ದಾನೆ.
ತೀವ್ರ ಅಸ್ವಸ್ಥಳಾದ ಮರಿಯಮ್ಮ ಸೋಮವಾರ ರಾತ್ರಿ ರಾಯಚೂರು ಆಸ್ಪತ್ರೆಯಲ್ಲಿ ಸಾವನ್ನಪಿದ್ದಾಳೆಂದು ವಡಗೇರಾ ಪಿಎಸ್ಐ ಎಂ.ಜಿ. ಪಾಟೀಲ್ ತಿಳಿಸಿದ್ದಾರೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಯನ್ನ ಕೊಂದ ಪತಿರಾಯ : ಸುರಪುರ ತಾಲೂಕಿನ ಹುಣಸಗಿಯಲ್ಲಿ ಮಂಗಳವಾರ ನಸುಕಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಮಲ್ಲಮ್ಮ ಅಲಿಯಾಸ್ ಅಂಬ್ರವ್ವ (30) ಕೊಲೆಯಾದ ಮಹಿಳೆ.
ಗಂಡ ಭೀಮಣ್ಣ ಮತ್ತು ಪತ್ನಿ ಮಲ್ಲಮ್ಮನ ಮಧ್ಯೆ ಆಗಾಗ್ಗೆ ಜಗಳ ನಡೆಯುತಿತ್ತು. ಮಂಗಳವಾರ ಬೆಳಿಗ್ಗೆ ಸಹ ಕ್ಷುಲ್ಲಕ ಕಾರಣಕ್ಕೆ ದಂಪತಿ ಮಧ್ಯೆ ಜಗಳ ಶುರವಾಗಿ, ಮೂರು ಗಂಟೆ ಸಮಯದಲ್ಲಿ ಭೀಮಣ್ಣ ಮಾಂಸ ಕತ್ತರಿಸುವ ಮಚ್ಚಿನಿಂದ ಪತ್ನಿಯ ಕುತ್ತಿಗೆಗೆ ನಾಲ್ಕಾರು ಬಾರಿ ಹೊಡೆದಾಗ ಅವಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ಸಿಪಿಐ ಎಂ.ಜಿ.ಸತ್ಯನಾರಾಯಣರಾವ್ ತಿಳಿಸಿದ್ದಾರೆ.












Click it and Unblock the Notifications