Get Updates
Get notified of breaking news, exclusive insights, and must-see stories!

ರೈಲು ದುರಂತ: ಕ್ಯಾನ್ಸಲ್ ಆದ ಟ್ರೈನ್ ಗಳ ಪಟ್ಟಿ

TN train mishap helpline
ವೆಲ್ಲೂರು, ಸೆ.14: ಇಲ್ಲಿನ ಅರಕೋಣಂ ಬಳಿ ನಡೆದ ರೈಲು ದುರಂತದಲ್ಲಿ ಸುಮಾರು 10 ಜನ ಮೃತ ಪಟ್ಟಿದ್ದು, 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭಾರಿ ಮಳೆಯಿಂದ ಪರಿಹಾರ ಕಾರ್ಯ ವಿಳಂಬವಾಗಿದ್ದು, ಚೆನ್ನೈ ಕಾಟ್ಪಾಡಿ ವಿಭಾಗದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಈ ದುರಂತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಚಾಲಕನ ಅಜಾಗರೂಕತೆ ಇರಬಹುದು ಎಂದು ಚೆನ್ನೈ ವಿಭಾಗದ ಮುಖ್ಯಸ್ಥ ಜಾನ್ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.

ಮೃತರ ಕುಟುಂಬ ವರ್ಗಕ್ಕೆ 5 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ ಪರಿಹಾರ ಧನವನ್ನು ಘೋಷಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.

ತುರ್ತು ಸೇವಾ ಸಹಾಯವಾಣಿಗಳನ್ನು ಬಳಸಿಕೊಳ್ಳಬಹುದಾಗಿದೆ

044 – 25355793
044 - 25353938
044 - 25352639
044 – 25352629
044 - 25357398
044 - 25347771

ಕ್ಯಾನ್ಸಲ್ ಆದ ಟ್ರೈನ್ ಗಳು:
* ಚೆನ್ನೈ ಸೆಂಟ್ರಲ್-ಬೆಂಗಳೂರು ಮೇಲ್
* ಚೆನ್ನೈ ಸೆಂಟ್ರಲ್-ಈರೋಡ್ ಎರಕೋಡ್ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್- ಕೊವೈ ಎಕ್ಸ್ ಪ್ರೆಸ್
* ಚೆನ್ನೈ-ಬೆಂಗಳೂರು ಬೃಂದಾವನ ಎಕ್ಸ್ ಪ್ರೆಸ್
* ಚನ್ನೈ ಕೊಮಮತ್ತೂರು ಡುರೊಂಟೋ ಎಕ್ಸ್ ಪ್ರೆಸ್
* ಅರಕೋಣಂ-ಜೋಳಾರ್ ಪಟ್ಟೈ ರೈಲು

ವಿಳಂಬ, ಮಾರ್ಗ ಬದಲಾವಣೆ:
* ಚೆನ್ನೈ ಸೆಂಟ್ರಲ್ ಮಂಗಳೂರು ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್ ಅಹ್ಮದಾಬಾದ್ ನವ್ ಜೀವನ್ ಎಕ್ಸ್ ಪ್ರೆಸ್
* ಚೆನ್ನೈ- ತಿರುವನಂತಪುರಂ
* ಚೆನ್ನೈ -ಬೆಂಗಳೂರು ಶತಾಬ್ದಿ ಎಕ್ಸ್ ಪ್ರೆಸ್
* ಚೆನ್ನೈ -ಬೆಂಗಳೂರು ಲಾಲ್ ಬಾಗ್ ಎಕ್ಸ್ ಪ್ರೆಸ್
* ಚೆನ್ನೈ ಮಂಗಳೂರು ಎಕ್ಸ್ ಪ್ರೆಸ್
* ಚೆನ್ನೈ -ಕೊಯಮತ್ತೂರು ಇಂಟರ್ ಸಿಟಿ

ಒಂಭತ್ತು ರೈಲುಗಳು ಚೆನ್ನೈ ಸೆಂಟ್ರಲ್ ಸ್ಟೇಷನ್ ನಿಂದ ತಡವಾಗಿ ಹೊರಟು ವಿಲ್ಲುಪುರಂ ಜಂಕ್ಷನ್ ಮೂಲಕ ಮಾರ್ಗ ಬದಲಿಸಿಕೊಂಡು ನಿಗದಿತ ಸ್ಥಳಕ್ಕೆ ತಲುಪಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+