ಕಟ್ಟಾಳುಗಳು ಜೈಲು ಪಾಲು: ನ್ಯಾಯ ದೇವತೆಗೆ ನಮೋ ನಮಹಃ

ಯಾವ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಜನ ರೋಸಿ ಹೋಗಿದ್ದರೋ, ಎಲ್ಲವೂ ಮುಗಿಯಿತು, ಮುಂದಿನ ಪೀಳಿಗೆಗೆ ಏನಪ್ಪಾ ಹೇಳೋದು ಅನ್ನುತ್ತಿದ್ದಾಗ ಅದಕ್ಕಿಂತ ಮುಂಚೆ ನಮ್ಮ ಕಾಲದಲ್ಲೇ ಇನ್ನೂ ಏನೇನು ನೋಡಬೇಕೋ ಎಂದು ಕ್ಷೋಭೆಗೊಳಗಾಗಿದ್ದರೋ ಅದೇ ನಾಡಿನಲ್ಲಿ ನ್ಯಾಯಾಂಗ ಸೆಟೆದು ನಿಂತಿದೆ.
ಯಾವ ಶಾಸಕಾಂಗ ತುಚ್ಚವಾಗಿ ನಡೆದುಕೊಂಡು ಜನ ಜೀವನವನ್ನು ಸಹನೀಯವಾಗಿಸಿತ್ತೋ ಆ ನಾಡಿನಲ್ಲಿ ದಕ್ಷ, ಪ್ರಮಾಣಿಕ ಅಧಿಕಾರಿಗಳು ಗೋಚರಿಸುತ್ತಿದ್ದಾರೆ. ಎಲ್ಲವೂ ಮುಗಿದಿಲ್ಲ, ನಾವಿದ್ದೇವೆ ಎಂದು ಭರವಸೆಯ ಆಶಾಕಿರಣವಾಗಿ ರಾರಾಜಿಸುತ್ತಿದ್ದಾರೆ.
ಇಂದಿನ ಯುವ ಪೀಳಿಗೆಗೆ 'ಹೌದು, ಎಲ್ಲವೂ ಮುಗಿದಿಲ್ಲ. ಒಳ್ಳೆಯ ದಿನಗಳು ಮುಂದಿವೆ. ಭ್ರಷ್ಟರಿಗೆ, ನಿಷ್ಪಾಪಿ ಹೆಣ್ಣು ಮಕ್ಕಳಿಗೆ ಕಂಟಕವಾಗಿರುವವರಿಗೆ ಶಿಕ್ಷೆ ಕಾದಿದೆ. ಕಿರಾತಕರಿಗೆ ಮುಂದಿದೆ ಮಾರಿ ಹಬ್ಬ' ಎನ್ನುವಂತಾಗಿದೆ. ನ್ಯಾಯ ದೇವತೆಗೆ ಉಘೇ ಉಘೇ !












Click it and Unblock the Notifications