ಅಡ್ವಾಣಿ ಪ್ರಧಾನಿ ಅಭ್ಯರ್ಥಿಯೇ? ಯಾತಕೆ ಯಾತ್ರಾ?

LK Advani New Rath Yatra
ನವದೆಹಲಿ, ಸೆ 10: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಪ್ರಧಾನ ಮಂತ್ರಿಯಾಗುತ್ತಾರೆಯೇ? ಹೀಗಂತ ಬಿಜೆಪಿ ನಾಯಕರಾರ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯಲ್ಲಿ ಪ್ರಶ್ನೆ ಕೇಳಿದಾಗ ಅವರು ಹೌದು ಎನ್ನಲಿಲ್ಲ, ಇಲ್ಲ ಎನ್ನಲಿಲ್ಲ. ಬದಲಾಗಿ ನೋ ಕಾಮೆಂಟ್ಸ್ ಎಂದರು.

ಎಲ್. ಕೆ. ಅಡ್ವಾಣಿಯವರು ಭ್ರಷ್ಟಾಚಾರದ ಬಗ್ಗೆ ರಾಷ್ಟ್ರದಾದ್ಯಂತ ಯಾತ್ರೆ ನಡೆಸಲು ಬಿಜೆಪಿ ಸಂಸದೀಯ ಸಮಿತಿ ಒಪ್ಪಿಗೆ ನೀಡಿದೆ. ಈ ಕುರಿತು ಅಡ್ವಾಣಿ ಪ್ರಧಾನಿ ಅಭ್ಯರ್ಥಿಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ. ಈ ಹಿಂದೆ ರಾಮರಥ ಯಾತ್ರೆಯ ಮೂಲಕ ಅಡ್ವಾಣಿ ಪಡೆದ ಜನಪ್ರಿಯತೆಯ ಹಿನ್ನಲೆಯು ಈ ಪ್ರಶ್ನೆಗಿದೆ.

"ಅಡ್ವಾಣಿ ನಡೆಸಲಿರುವ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ರಾಜಕೀಯವಿಲ್ಲ. ಅವರ ಯಾತ್ರೆಗೆ ಪಕ್ಷ ಒಪ್ಪಿಗೆ ನೀಡಿದೆ. ನಾವು ಅವರ ಯಾತ್ರೆಗೆ ಸಹಕಾರ ನೀಡುತ್ತೇವೆ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸುಷ್ಮಾ ಮಾತನ್ನು ಅರುಣ್ ಜೇಟ್ಲಿ ಅನುಮೋದಿಸುತ್ತಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಎಲ್. ಕೆ. ಅಡ್ವಾಣಿಯೇ? ಅಥವಾ ನರೇಂದ್ರ ಮೋದಿಯೇ? ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+