ಮೈತ್ರಾದೇವಿ ಆತ್ಮ ಯಡ್ಡಿಯನ್ನು ಕಾಪಾಡುತ್ತದೆಯೇ?

ಆದರೆ, ಯಡಿಯೂರಪ್ಪ ಅವರ ರಾಘವೇಂದ್ರ ಸ್ವಾಮಿ ಭಕ್ತಿ ಹೊಸತೇನಲ್ಲ. ಶಿಕಾರಿಪುರಕ್ಕೆ ಬಂದು ನೆಲೆಸಿ, ಮೈತ್ರಾದೇವಿಯವರನ್ನು ಮದುವೆಯಾದ ನಂತರದ ದಿನಗಳಲ್ಲಿ ಶುರುವಾದ ರಾಘವೇಂದ್ರ ಸ್ವಾಮಿಗಳ ಮೇಲಿನ ಅವರ ನಂಬಿಕೆ ಇದುವರೆವಿಗೂ ಮುಂದುವರಿದುಕೊಂಡೇ ಬಂದಿದೆ.
ಒಂದು ಮೂಲದ ಪ್ರಕಾರ ಯಡಿಯೂರಪ್ಪನವರಿಗೆ ರಾಯರ ಬಗ್ಗೆ ಅಪಾರ ಭಕ್ತಿ ಮೂಡಲು ಮೂಲ ಕಾರಣವಾಗಿದ್ದು ಅವರ ಪತ್ನಿ ಮೈತ್ರಾದೇವಿ. ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ಮೇಲೆ ಗಂಡು ಮಕ್ಕಳು ಬೇಕೆಂದು ಬಯಸಿದ್ದ ದಂಪತಿಗಳು ಅದಕ್ಕಾಗಿ ಮಂತ್ರಾಲಯದ ಗುರು ರಾಘವೇಂದ್ರ ಯತಿಗಳಿಗೆ ಹರಕೆ ಹೊತ್ತರು.
ಇದರ ಫಲವಾಗಿ ಜನಿಸಿದ ಮೊದಲ ಗಂಡು ಮಗನಿಗೆ ಅವರಿಟ್ಟ ಹೆಸರು ರಾಘವೇಂದ್ರ. ಆತನೇ ಈಗ ಶಿವಮೊಗ್ಗ ಸಂಸದ. ಇನ್ನೋರ್ವ ಮಗ ವಿಜಯೇಂದ್ರ. ಈ ಹೆಸರು ರಾಘವೇಂದ್ರ ಸ್ವಾಮಿಗಳ ಗುರು ಸುಧೀಂದ್ರ ತೀರ್ಥರ ಗುರುಗಳದು.
ಹೀಗೆ ಗಂಡು ಮಕ್ಕಳು ಜನಿಸಿದ ಮೇಲೆ ಯಡಿಯೂರಪ್ಪ ಹಾಗೂ ಮೈತ್ರಾದೇವಿ ಅವರ ಭಕ್ತಿ ಗಾಢವಾಗುತ್ತಾ ಹೋಯಿತು. ಇದರ ಪ್ರತೀಕವಾಗಿ ಯಡಿಯೂರಪ್ಪ ಅವರ ಮನೆಯ ದೇವರಕೋಣೆಯಲ್ಲಿ ರಾಯರ ಬೆಳ್ಳಿ ಫೋಟೊ ಭದ್ರವಾಗಿ ನೆಲೆಯಾಯಿತು.
ಮನೆ ದೇವರಾದ ಯಡಿಯೂರು ಸಿದ್ದಲಿಂಗೇಶ್ವರ ಫೋಟೋ ನಂತರ ರಾಯರ ಬೆಳ್ಳಿ ಕಟ್ಟಿನ ಸುಂದರ ಮೂರ್ತಿಗೆ ಪ್ರಾಶಸ್ತ್ಯ. ಕಷ್ಟ ಬಂದಾಗ ತಪ್ಪದೇ ಜ್ಯೋತಿಷಿಗಳ ಮೊರೆ ಹೊಕ್ಕುವ ಯಡಿಯೂರಪ್ಪ ಅವರಿಗೆ ಅನೇಕ ಬಾರಿ ಸ್ವಪ್ನದಲ್ಲಿ ಮಂತ್ರಾಲಯಕ್ಕೆ ಹೋಗುವಂತೆ ಮೈತ್ರಾದೇವಿ ಮೂಲಕ ಪ್ರೇರಣೆಯಾಗುವುದಂತೆ.
ಹೀಗೆ ಹಲವು ಬಾರಿ ಮಂತ್ರಾಲಯದ ರಾಯರ ಸನ್ನಿಧಿಗೆ ಹೋಗಿ ಬಂದ ಅವರ ಕಷ್ಟಗಳು ನಿವಾರಣೆಯಾಗಿದೆಯಂತೆ. ಅದರೆ, ಎಲ್ಲೂ ಕೂಡಾ ಈ ಬಗ್ಗೆ ಯಡಿಯೂರಪ್ಪ ಅವರು ಹೇಳಿಕೊಂಡಿಲ್ಲ. ಈಗ ಮತ್ತೆ ಭೂ ಹಗರಣ, ಅಕ್ರಮ ಗಣಿಗಾರಿಕೆ, ಸ್ವಜನ ಪಕ್ಷಪಾತ ಮುಂತಾದ ಕೇಸ್ ಗಳ ಸುಳಿಯಲ್ಲಿರುವ ಯಡಿಯೂರಪ್ಪ ಅವರನ್ನು ಯಾರು ರಕ್ಷಿಸುವರು ಕಾದು ನೋಡಬೇಕಿದೆ?
[ಸುದ್ದಿ ಮೂಲ: ಆರ್.ಟಿ. ವಿಟ್ಠಲ ಮೂರ್ತಿ, ಹಾಯ್ ಬೆಂಗಳೂರ್ ಲೇಖನ]
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications