ಅಂತೂ ನಾರಾಯಣ ಹೃದಯಾಲಯಕ್ಕೆ ಶ್ರೀಗುರು ದಾಖಲು

Durgappa and Nagamma with their kid
ಬೆಂಗಳೂರು, ಸೆ. 8 : ಹೃದಯಬೇನೆಯಿಂದ ನರಳುತ್ತಿರುವ 3 ತಿಂಗಳ ಹಸುಗೂಸು ಶ್ರೀಗುರು ಚಿಕಿತ್ಸೆಗೆಂದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದೆ. ಯಾದಗಿರಿಯ ಮಗುವಿನ ತಂದೆಯ ಗುರುತಿನ ಚೀಟಿಯಲ್ಲಿ ಅಪ್ಪ ದುರ್ಗಪ್ಪ ಅವರ ಹೆಸರು ಇರದಿದ್ದ ಕಾರಣ ವೈದ್ಯರು ಮಗುವಿನ ಪಾಲಕರನ್ನು ವಾಪಸ್ ಕಳಿಸಿದ್ದರು.

ಈ ಕುರಿತಂತೆ ಒನ್ ಇಂಡಿಯಾ ಕನ್ನಡದಲ್ಲಿ 'ದಾಖಲೆ ಬದಿಗಿಟ್ಟು ಚಿಕಿತ್ಸೆಗೆ ಮೊದಲಾಗಿ'ರೆಂದು ಆಗ್ರಹಿಸಿ ವರದಿ ಪ್ರಕಟವಾಗಿತ್ತು. ತೀವ್ರ ಹಣದ ಮುಗ್ಗಟ್ಟು ಎದುರಿಸುತ್ತಿರುವ ಅಲೆಮಾರಿ ಜನಾಂಗದ ಕುಂಚಕೊರವರ ಸಮುದಾಯದ ದುರ್ಗಪ್ಪ ಮತ್ತು ನಾಗಮ್ಮ ಜಿಲ್ಲಾಧಿಕಾರಿಗಳ ಕಚೇರಿ ಅಲೆದು ಸುಸ್ತಾಗಿದ್ದರು. ಈ ಕುರಿತು ವರದಿ ಪ್ರಕಟವಾದ ಬೆನ್ನಲ್ಲೆ ದಾನಿಗಳು ಶ್ರೀಗುರುವಿಗೆ ಮರುಜನ್ಮ ನೀಡಲು ಮುಂದಾಗಿದ್ದಾರೆ.

ಶಹಪೂರದ ತಹಶೀಲ್ದಾರರು ಮತದಾರರ ಚೀಟಿಯಲ್ಲಿ ತಪ್ಪಾಗಿ ನಮೂದಾಗಿದ್ದ ಹೆಸರನ್ನು ಸರಿಪಡಿಸಿ ಫ್ಯಾಕ್ಸ್ ಮುಖಾಂತರ ನಾರಾಯಣ ಹೃದಯಾಲಯಕ್ಕೆ ಕಳುಹಿಸಿದ್ದಾರೆ. ವಾಜಪೇಯಿ ಆರೋಗ್ಯ ಚಿಕಿತ್ಸೆ ಯೋಜನೆಯಡಿಯಲ್ಲಿ ನಾರಾಯಣ ಹೃದಯಾಲಯದಲ್ಲಿ ನಾಗಮ್ಮ ಹಾಗೂ ದುರ್ಗಪ್ಪ ದಂಪತಿ ತಮ್ಮ ಮಗವನ್ನು ಒಳರೋಗಿಯಾಗಿ ದಾಖಲಿಸಿದ್ದಾರೆ.

ನಾರಾಯಣ ಹೃದಯಾಲಯದ ವೈದ್ಯರು ಮಗುವಿಗೆ ನೆಗಡಿ ಹಾಗೂ ಜ್ವರವಿದ್ದ ಕಾರಣ ಮಗು ಸಂಪೂರ್ಣವಾಗಿ ಆರೋಗ್ಯವಾದ ಮೇಲೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹೇಳಿದ್ದಾರೆ. ದಾನಿಗಳಿಂದಲೂ ಕೂಡ ಆರ್ಥಿಕ ನೆರವು ಸಿಕ್ಕಿದ್ದು, ಮಗುವಿನ ಪಾಲಕರಲ್ಲಿ ಸಂತೋಷ ಹಾಗೂ ಬದುಕಿನ ಹೊಸ ಆಶಾಕಿರಣದೆ. ಆದಷ್ಟೂ ಬೇಗ ಶ್ರೀಗುರು ಗುಣಮುಖರಾಗಿ ತನ್ನ ತಂದೆ ತಾಯಿಯೊಂದಿಗೆ ಆರಾಮವಾಗಿರಲಿ ಎನ್ನುವುದು ನಮ್ಮ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+