ಜಗನ್ ಕುಟುಂಬ ಏಳಿಗೆಗೆ, ರೆಡ್ಡಿ ಕಿರೀಟ ಸೇವೆ

ಕಳೆದ ದಶಕದಲ್ಲಿ ಸುಮಾರು ವಜ್ರ ಖಚಿತ ಬಂಗಾರದ 32 ಕಿರೀಟಗಳನ್ನು ಆಂಧ್ರ ಪ್ರದೇಶ. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ರೆಡ್ಡಿ ಕುಟುಂಬ ನೀಡಿದೆ. ಈ ಕಿರೀಟ ಕಳೆದುಕೊಂಡಿರುವ ಜನಾರ್ದನ ರೆಡ್ಡಿ ಅವರು ನೀಡಿರುವ ಕಿರೀಟ ದಾನ ಸೇವೆಗೂ ಜಗನ್ ಕುಟುಂಬದ ಏಳಿಗೆಗೂ ಭಾರಿ ಕನೆಕ್ಷನ್ ಇರುವುದು ಗೊತ್ತಾಗಿದೆ.
ಬ್ರಹ್ಮಣಿ ಸ್ಟೀಲ್ಸ್ ಗೆ ವೈಎಸ್ ಆರ್ ಅನುಮತಿ(ಚಂದ್ರಬಾಬು ನಾಯ್ಡು ಲೈಸನ್ಸ್ ನೀಡಿದ್ದು ಎಂಬ ಸುದ್ದಿ ಕೂಡಾ ಇದೆ) ನೀಡಿದ ಖುಷಿಯಲ್ಲಿ ಕಂಪನಿ ಏಳಿಗೆಗಾಗಿ ತಿರುಮಲ ತಿರುಪತಿ ದೇಗುಲಕ್ಕೆ ಒಂದು ವಜ್ರಖಚಿತ ದೊಡ್ಡ ಕಿರೀಟ ದಾನ ಮಾಡಿದರು.
ಒಸಿಎಂಗೆ ಗಣಿ ಗುತ್ತಿಗೆ ಪರವಾನಗಿ ಸಿಕ್ಕ ಖುಷಿಯಲ್ಲಿ ಎರಡನೇ ಕಿರೀಟವನ್ನು ತಿಮ್ಮಪ್ಪನಿಗೆ ನೀಡಿದರು. ವೈಎಸ್ ರಾಜಶೇಖರ ರೆಡ್ಡಿ ಆಂಧ್ರ ಚುನಾವಣೆಯಲ್ಲಿ ಜಯಗಳಿಸಿದಾಗ ಮೂರನೇ ಕಿರೀಟ ನೀಡಿದ್ದಾರೆ.
ನಂತರ 2011ರ ಮೇ ತಿಂಗಳಿನಲ್ಲಿ ಕಡಪ ಲೋಕಸಭಾ ಉಪ ಚುನಾವಣೆಯಲ್ಲಿ ಜಗನ್ ಮೋಹನರೆಡ್ಡಿ ಜಯಗಳಿಸಿ ಸಂಸದನಾದ ಸಂದರ್ಭದಲ್ಲಿ ಶ್ರೀಕಾಳಹಸ್ತಿಯ ಶ್ರೀ ಜ್ಞಾನ ಪ್ರಸೂನಾಂಭಿಕಾ ದೇವಿ ದೇವಸ್ಥಾನಕ್ಕೆ 12 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಜನಾರ್ದನ ರೆಡ್ಡಿ ದಾನ ಮಾಡಿದ್ದರು.
ವೈಎಸ್ ಆರ್ ಕುಟುಂಬದ ಏಳಿಗೆಯ ಜೊತೆಜೊತೆಗೆ ಬಳ್ಳಾರಿ ರೆಡ್ಡಿ ಸೋದರರು ದಕ್ಷಿಣ ಭಾರತದ ದೇವರುಗಳಿಗೆ ಕಿರೀಟ ತೊಡಿಸತೊಡಗಿದರು. ಆದರೆ, ಇಂದು ಜನಾರ್ದನ ರೆಡ್ಡಿ ಜೊತೆ ಅಂಥ ಸಂಬಂಧವಿಲ್ಲ ಎಂದು ಜಗನ್ ಹೇಳುತ್ತಿದ್ದಾರೆ. ವೈಎಸ್ ಆರ್ ಗೆ ನಿಷ್ಠೆ ಮೆರೆದ ಜನಾರ್ದನ ರೆಡ್ಡಿ ಬಗ್ಗೆ ಕನಿಷ್ಠ ಸಾಂತ್ವನ ಮಾತು ಸಹ ಜಗನ್ ಮೋಹನ್ ರೆಡ್ಡಿ ಕಡೆಯಿಂದ ಬಂದಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications