ಬೆಂಗ್ಳೂರು ಪತ್ರಕರ್ತರಿಗೆ ಚೀಪ್ ಅಂಡ್ ಬೆಸ್ಟ್ ಲಂಚ್

42 ನೇ ವರ್ಷಕ್ಕೆ ಕಾಲಿಡುತ್ತಿರುವ ಕ್ಲಬ್ ತನ್ನ ಸದಸ್ಯರು ಮತ್ತು ದುಡಿಯುವ ಪತ್ರಕರ್ತರ ಅನುಕೂಲಕ್ಕಾಗಿ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಬೆಳಗಿನಿಂದ ಮಧ್ಯರಾತ್ರಿಯವರೆಗೆ ದುಡಿಯುವ ಕ್ಲಬ್ಬಿನ ಸದಸ್ಯರು ಮತ್ತು ಪತ್ರಕರ್ತರಿಗೆ ಮಧ್ಯಾಹ್ನದ ಊಟ ಒದಗಿಸುವ ಯೋಜನೆ ಅದಾಗಿದೆ.
ಅತ್ಯುತ್ತಮ ರುಚಿ, ಶುಚಿಯಾದ ಭೋಜನ ನೀಡಲು ನಗರದ ಇಸ್ಕಾನ್ (ISKCON) ಸಂಸ್ಥೆ ಸಹಯೋಗದೊಂದಿಗೆ ಮಧ್ಯಾನ್ಹದ ಊಟದ ಯೋಜನೆ ಪ್ರೆಸ್ಕ್ಲಬ್ನಲ್ಲಿ ಸೆ. 5ರಿಂದ ಜಾರಿಗೆ ಬಂದಿದೆ. ಈ ಯೋಜನೆಯನ್ನು ಸಚಿವ ಆರ್ ಅಶೋಕ್ ಸೋಮವಾರ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಪೊನ್ನಪ್ಪ ಉಪಸ್ಥಿತರಿದ್ದರು.
ಅಪರಾಹ್ನ 1 ರಿಂದ 3 ಗಂಟೆಯವರೆಗೆ ಪತ್ರಕರ್ತರು, ಛಾಯಾಚಿತ್ರಕಾರರು ಮತ್ತು ಕ್ಲಬ್ ಸದಸ್ಯರಿಗೆ 10 ರೂ. ಬೆಲೆಯಲ್ಲಿ ಪುಷ್ಕಳ ಭೋಜನ ನೀಡುವ ಕಾರ್ಯಕ್ರಮ ಜಾರಿಯಾಗಿದ್ದು, ಮಾಧ್ಯಮ ಮಿತ್ರರು ಇದರ ಪ್ರಯೋಜನ ಪಡೆಯಬೇಕೆಂದು ಕಾರ್ಯದರ್ಶಿ ಸದಾಶಿವ ಶೆಣೈ ಮಂಗಳವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಕ್ಲಬ್ ಸುತ್ತಮುತ್ತ ಬರೀ ತ್ರಿತಾರಾ, ಚತುರ್ತಾರಾ, ಪಂಚತಾರಾ ಹೋಟೆಲುಗಳೇ ಆವರಿಸಿಕೊಂಡಿದ್ದು ಕೈಗೆಟಕುವ ಬೆಲೆಯಲ್ಲಿ ಮಧ್ಯಾನ್ಹದ ಊಟ ಮಾಡುವುದು ತುಂಬಾ ತೊಂದರೆ ಆಗಿತ್ತು. ಈ ಕೊರತೆ ನಿವಾರಣೆ ಮಾಡುವುದೇ ಮಧ್ಯಾಹ್ನ ಪುಷ್ಕಳ ಭೋಜನ ಕಾರ್ಯಕ್ರಮದ ಉದ್ದಿಶ್ಯ ಎಂದು ಶೆಣೈ ವಿವರಿಸಿದರು.
ಓದುವ ಬರೆಯುವ ಪತ್ರಕರ್ತರಿಗೆ ಈ ಭೋಜನ 10 ರೂ. ಬೆಂಬಲ ಬೆಲೆಯಲ್ಲಿ ಲಭ್ಯವಾಗಿದ್ದು ಅದೂ ಫುಲ್ ಮೀಲ್ಸ್ ಆಗಿರುವುದರಿಂದ ದಿಲ್ ಖುಷ್ ಆಗಿದೆ ಎಂದು ಸೋಮವಾರ ಊಟ ಸವಿದ ಗೆಳೆಯರು ದಟ್ಸ್ ಕನ್ನಡ ವರದಿಗಾರರಿಗೆ ತಿಳಿಸಿದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications