ರೆಡ್ಡಿಗಳಿಗೆ ತಟ್ಟಿದ ಸುಗ್ಗಲಮ್ಮ ದೇವಿಯ ಶಾಪ?

ಕಾಕತಾಳೀಯವೆಂಬಂತೆ ಸುಗ್ಗಲಮ್ಮ ಗುಡಿ ಧ್ವಂಸವಾಗಿ ಇಂದಿಗೆ ಸರಿಯಾಗಿ ಐದು ವರ್ಷಗಳಾಗಿವೆ. ಬಳ್ಳಾರಿ ಜಿಲ್ಲೆಯ ಗಣಿ ಹಗರಣ ಕರ್ನಾಟಕ - ಆಂಧ್ರದ ಗಮನ ಸೆಳೆದಿದ್ದೇ ಸುಗ್ಗಲಮ್ಮ ಗುಡಿ ಧ್ವಂಸ ಪ್ರಕರಣದಿಂದ.
2006ರ ಸೆಪ್ಟೆಂಬರ್ 3ರ ಒಂದು ವಾರ ಪೂರ್ವದಿಂದಲೇ ಸುಗ್ಗಲಮ್ಮ ಗುಡಿಯಲ್ಲಿ ಕೇರಳ - ತಮಿಳುನಾಡು ಮೂಲದ ಮಾಂತ್ರಿಕರು ಹಗಲಿರುಳೂ ನಾನಾ ಪೂಜೆಗಳನ್ನು ನಡೆಸಿ, ಬಲಿಗಳನ್ನು ನೀಡಿ ಈ ದೇವಸ್ಥಾನವನ್ನೇ ಸ್ಪೋಟಿಸಿದ್ದರು. ಈ ಪ್ರಕರಣ ರಾಜಕೀಯ ಬಣ್ಣ ಪಡೆದು ಪರ - ವಿರೋಧ ಮೊಕದ್ದಮೆಗಳು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಈ ಕುರಿತು ಸಿಬಿಐ ಕೂಡ ಗಮನ ನೀಡಿ ಸುಗ್ಗಲಮ್ಮ ಗುಡಿ ಇದ್ದ ಸ್ಥಳಕ್ಕೆ ಜನೆವರಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಿಬಿಐ ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಮತ್ತು ಖಾನ್ ನೇತೃತ್ವದ ತಂಡ ಸುಗ್ಗಲ್ಲಮ್ಮ ದೇವಸ್ಥಾನದ ಸಂಪೂರ್ಣ ಮಾಹಿತಿ ಸಂಗ್ರಹಸಿದ್ದಾರೆ. ಗುಡಿಯನ್ನು ಓಎಂಸಿ ಸ್ಪೋಟಿಸಿ ಮೂರ್ತಿಯ ಕೆಳಗಿದ್ದ ಅಪಾರ ಪ್ರಮಾಣದ ಮೌಲ್ಯಯುಕ್ತ ಅದಿರನ್ನು ಲೂಟಿ ಮಾಡಿರುವುದು ಸಾಬೀತಾಗಿತ್ತು.
1896ರ ನಕ್ಷೆಯ ಆಧರಿಸಿ ತನಿಖೆ ನಡೆಸಿದ ಅಧಿಕಾರಿಗಳು, ಐತಿಹಾಸಿಕ ಮಹತ್ವ ಹೊಂದಿದ್ದ ದೇವಸ್ಥಾನ ಇಲ್ಲಿತ್ತು, ಈಗೆಲ್ಲಿದೆ ಎಂದು ಓಎಂಸಿ ಸಿಬ್ಬಂದಿಯನ್ನು ಖಾರವಾಗಿಯೇ ಪ್ರಶ್ನಿಸಿದ್ದರು. ಆಗ, ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ ರೆಡ್ಡಿ ದೇವಸ್ಥಾನ ಇಲ್ಲಿ ಇರಲೇ ಇಲ್ಲ, ಸ್ಪೋಟಿಸುವ ವಿಚಾರ ಎಲ್ಲಿ? ಎಂದಿದ್ದರು. ಓಎಂಸಿ ಮೈನ್ಸ್ ಮ್ಯಾನೇಜರ್ ಶಿವಕುಮಾರ್ ಇಲ್ಲಿ ಸಣ್ಣದಾದ ಗುಡಿ ಇತ್ತು, ಗಣಿ ಚಟುವಟಿಕೆಗಳ ಸಂದರ್ಭದಲ್ಲಿ ಹಾಳಾಗಿದೆ ಎಂದಿದ್ದರು.
ವಿಚಾರಣೆ ಮುಂದುವರೆದಾಗ ಬಿ. ಶ್ರೀನಿವಾಸ ರೆಡ್ಡಿ ಅವರು ನಾವು ಹೊಸದಾಗಿ ದೊಡ್ಡದಾದ ಗುಡಿ ಕಟ್ಟಿಸಿದ್ದೇವೆ ಎಂದು ಹೇಳಿ ತನಿಖೆಯ ದಿಕ್ಕಿಗೆ ಸ್ಪಷ್ಟತೆ ನೀಡಿದರು. ಸಿಬಿಐ ಅಧಿಕಾರಿ ನೀವು ಗುಡಿಯನ್ನು ಸ್ಪೋಟಿಸಿಲ್ಲ ಎನ್ನುವುದಾದಲ್ಲಿ ಹೊಸ ಗುಡಿಯನ್ನೇಕೆ ನಿರ್ಮಿಸಿದ್ದೀರಿ? ಎಂದಾಗ ಎಲ್ಲರೂ ಮೌನ. ಸುಗ್ಗಲಮ್ಮ ಗುಡಿಯನ್ನು ಧ್ವಂಸ ಮಾಡಿದ್ದೇ ಸಿಬಿಐ ತನಿಖೆಯಲ್ಲಿ ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಟ್ಟಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications