ರೆಡ್ಡಿಗಳಿಗೆ ತಟ್ಟಿದ ಸುಗ್ಗಲಮ್ಮ ದೇವಿಯ ಶಾಪ?

ಕಾಕತಾಳೀಯವೆಂಬಂತೆ ಸುಗ್ಗಲಮ್ಮ ಗುಡಿ ಧ್ವಂಸವಾಗಿ ಇಂದಿಗೆ ಸರಿಯಾಗಿ ಐದು ವರ್ಷಗಳಾಗಿವೆ. ಬಳ್ಳಾರಿ ಜಿಲ್ಲೆಯ ಗಣಿ ಹಗರಣ ಕರ್ನಾಟಕ - ಆಂಧ್ರದ ಗಮನ ಸೆಳೆದಿದ್ದೇ ಸುಗ್ಗಲಮ್ಮ ಗುಡಿ ಧ್ವಂಸ ಪ್ರಕರಣದಿಂದ.
2006ರ ಸೆಪ್ಟೆಂಬರ್ 3ರ ಒಂದು ವಾರ ಪೂರ್ವದಿಂದಲೇ ಸುಗ್ಗಲಮ್ಮ ಗುಡಿಯಲ್ಲಿ ಕೇರಳ - ತಮಿಳುನಾಡು ಮೂಲದ ಮಾಂತ್ರಿಕರು ಹಗಲಿರುಳೂ ನಾನಾ ಪೂಜೆಗಳನ್ನು ನಡೆಸಿ, ಬಲಿಗಳನ್ನು ನೀಡಿ ಈ ದೇವಸ್ಥಾನವನ್ನೇ ಸ್ಪೋಟಿಸಿದ್ದರು. ಈ ಪ್ರಕರಣ ರಾಜಕೀಯ ಬಣ್ಣ ಪಡೆದು ಪರ - ವಿರೋಧ ಮೊಕದ್ದಮೆಗಳು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಈ ಕುರಿತು ಸಿಬಿಐ ಕೂಡ ಗಮನ ನೀಡಿ ಸುಗ್ಗಲಮ್ಮ ಗುಡಿ ಇದ್ದ ಸ್ಥಳಕ್ಕೆ ಜನೆವರಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಿಬಿಐ ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಮತ್ತು ಖಾನ್ ನೇತೃತ್ವದ ತಂಡ ಸುಗ್ಗಲ್ಲಮ್ಮ ದೇವಸ್ಥಾನದ ಸಂಪೂರ್ಣ ಮಾಹಿತಿ ಸಂಗ್ರಹಸಿದ್ದಾರೆ. ಗುಡಿಯನ್ನು ಓಎಂಸಿ ಸ್ಪೋಟಿಸಿ ಮೂರ್ತಿಯ ಕೆಳಗಿದ್ದ ಅಪಾರ ಪ್ರಮಾಣದ ಮೌಲ್ಯಯುಕ್ತ ಅದಿರನ್ನು ಲೂಟಿ ಮಾಡಿರುವುದು ಸಾಬೀತಾಗಿತ್ತು.
1896ರ ನಕ್ಷೆಯ ಆಧರಿಸಿ ತನಿಖೆ ನಡೆಸಿದ ಅಧಿಕಾರಿಗಳು, ಐತಿಹಾಸಿಕ ಮಹತ್ವ ಹೊಂದಿದ್ದ ದೇವಸ್ಥಾನ ಇಲ್ಲಿತ್ತು, ಈಗೆಲ್ಲಿದೆ ಎಂದು ಓಎಂಸಿ ಸಿಬ್ಬಂದಿಯನ್ನು ಖಾರವಾಗಿಯೇ ಪ್ರಶ್ನಿಸಿದ್ದರು. ಆಗ, ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ ರೆಡ್ಡಿ ದೇವಸ್ಥಾನ ಇಲ್ಲಿ ಇರಲೇ ಇಲ್ಲ, ಸ್ಪೋಟಿಸುವ ವಿಚಾರ ಎಲ್ಲಿ? ಎಂದಿದ್ದರು. ಓಎಂಸಿ ಮೈನ್ಸ್ ಮ್ಯಾನೇಜರ್ ಶಿವಕುಮಾರ್ ಇಲ್ಲಿ ಸಣ್ಣದಾದ ಗುಡಿ ಇತ್ತು, ಗಣಿ ಚಟುವಟಿಕೆಗಳ ಸಂದರ್ಭದಲ್ಲಿ ಹಾಳಾಗಿದೆ ಎಂದಿದ್ದರು.
ವಿಚಾರಣೆ ಮುಂದುವರೆದಾಗ ಬಿ. ಶ್ರೀನಿವಾಸ ರೆಡ್ಡಿ ಅವರು ನಾವು ಹೊಸದಾಗಿ ದೊಡ್ಡದಾದ ಗುಡಿ ಕಟ್ಟಿಸಿದ್ದೇವೆ ಎಂದು ಹೇಳಿ ತನಿಖೆಯ ದಿಕ್ಕಿಗೆ ಸ್ಪಷ್ಟತೆ ನೀಡಿದರು. ಸಿಬಿಐ ಅಧಿಕಾರಿ ನೀವು ಗುಡಿಯನ್ನು ಸ್ಪೋಟಿಸಿಲ್ಲ ಎನ್ನುವುದಾದಲ್ಲಿ ಹೊಸ ಗುಡಿಯನ್ನೇಕೆ ನಿರ್ಮಿಸಿದ್ದೀರಿ? ಎಂದಾಗ ಎಲ್ಲರೂ ಮೌನ. ಸುಗ್ಗಲಮ್ಮ ಗುಡಿಯನ್ನು ಧ್ವಂಸ ಮಾಡಿದ್ದೇ ಸಿಬಿಐ ತನಿಖೆಯಲ್ಲಿ ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಟ್ಟಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications