ಇಂದಿರಾಗಾಂಧಿಯೇ ಜೈಲಿಗೆ ಹೋಗಿದ್ದರು, ಯಡ್ಡಿ ಯಾವ ಮಹಾ?
ಬೆಂಗಳೂರು,
ಆಗಸ್ಟ್ 29: ಶಿವಮೊಗ್ಗದ ಭೂಹಗರಣ ಸಂಬಂಧ (ಡಿನೋಟಿಫಿಕೇಶನ್) ವಕೀಲ ಸಿರಾಜಿನ್ ಬಾಷಾ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದ ಯಡಿಯೂರಪ್ಪ ಅವರ ಬಂಧನದ ಸಾಧ್ಯೆಗಳು ಹೆಚ್ಚಾಗಿವೆ. id="toptextpromo">ಬಂಧನ
ಭೀತಿಯಿಂದ ಹೊರಬರಲು ಯಡಿಯೂರಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸುಧೀಂದ್ರರಾವ್ ಅವರು ಸಮನ್ಸ್ ಜಾರಿ ಮಾಡಿದ್ದಾರೆ. ಡಿನೋಟಿಫಿಕೇಷನ್ ಹಾಗೂ ವಿವಿಧ ಕಂಪನಿಗಳಿಂದ ದೇಣಿಗೆ ಪಡೆಯುವಾಗ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರು ಅಕ್ರಮವೆಸಗಿದ್ದಾರೆಂದು ಆರೋಪಿಸಿ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಮೊಕದ್ದಮೆ ಸಲ್ಲಿಸಿದ್ದರು. id='are-slot-1' class='oiad oi-axt oiadv'> id='top-searched-articles'>'ಕಾನೂನಿಗೆ
ಎಲ್ಲರೂ ತಲೆಬಾಗಲೇ ಬೇಕು. ಇವತ್ತಿನ ಪರಿಸ್ಥಿತಿ ಈ ರೀತಿ ಇದೆ. ರಾಜಕೀಯ ಬದುಕಿನಲ್ಲಿ ಇವೆಲ್ಲ ಸಾಮಾನ್ಯ. ಅಂಥಾ ಇಂದಿರಾಗಾಂಧಿಯೇ ಜೈಲಿಗೆ ಹೋಗಿದ್ದು, ಆಮೇಲೆ ಏನಾಯಿತು? ಕಳಂಕ ತೊಳೆದುಕೊಂಡು ಮತ್ತೆ ಪ್ರಧಾನಿ ಆದರು. ಅದೇ ರೀತಿ, ಯಡಿಯೂರಪ್ಪ ಕೂಡ ಅಗ್ನಿಪರೀಕ್ಷೆಯಲ್ಲಿ ಪಾಸಾಗಿ ಮತ್ತೆ ರಾಜಕಾರಣದಲ್ಲಿ ವಿಜೃಂಭಿಸುವ ವಿಶ್ವಾಸ ತಮಗೆ ಇದೆಯೆಂದು ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications