ಎನ್ಆರ್ ಕಾಲೋನಿ: ಕಿಲ್ಲರ್ ಬಿಎಂಟಿಸಿಗೆ 2 ಮಹಿಳೆಯರು ಬಲಿ

ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಚಾಲಕನಿಗೆ ಮೂರ್ಛೆ ಬಂದು, ಬಸ್ಸಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೆಜೆಸ್ಟಿಕ್ನಿಂದ ತ್ಯಾಗರಾಜ ನಗರ ಕಡೆಗೆ ಹೊರಟ್ಟಿದ್ದ ಬಸ್ ಎನ್ಆರ್ ಕಾಲೋನಿ ದಾಟಿ, ಕಟ್ಟೆ ಬಳಗದ ಎದುರು ಎಡ ತಿರುವು ಪಡೆದು ಸ್ವಲ್ಪ ದೂರ ಹೋಗುತ್ತಿದ್ದಂತೆ ಕಂಡಕ್ಟರಿಗೆ ಫಿಟ್ಸ್ ಬಂದು ಅಪಘಾತವಾಗಿದೆ. ನಡೆದುಕೊಂಡು ಹೋಗುತ್ತಿದ್ದ ಮಮತಾ ನಾಗೇಶ್, ಜಯಾ ಹಾಗೂ ಶೀಬಾ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬಿಎಂಟಿಸಿ ಅಪಘಾತದಿಂದ ಇಬ್ಬರು ಮೃತಪಟ್ಟ ಘಟನೆಯಿಂದ ಕೆರಳಿದ ಸಾರ್ವಜನಿಕರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಸಂಪೂರ್ಣ ಜಖಂಗೊಳಿಸಿದ್ದಾರೆ. ಚಾಲಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಈ ಘಟನೆಯಿಂದ ಸಾಬೀತಾಗುತ್ತದೆ. ಅಭ್ಯರ್ಥಿಗಳ ಆರೋಗ್ಯ ಸರಿಯಿಲ್ಲದಿದ್ದರೂ ಲಂಚ ತಿಂದು ಅಂಥಹವರನ್ನೇ ನೇಮಕ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.
ಇದು ಬಿಎಂಟಿಸಿಯ ಸಂಪೂರ್ಣ ಬೇಜವಾಬ್ದಾರಿತನ. ದೈಹಿಕವಾಗಿ ಸಮರ್ಥರಾಗಿರುವ ಚಾಲಕರನ್ನೇ ರೂಟ್ ಮೇಲೆ ಕಳಿಸಬೇಕು. ಇಲ್ಲವಾದಲ್ಲಿ ಬಿಎಂಟಿಸಿ ಅಪಘಾತಗಳಿಗೆ ಇನ್ನೂ ಎಷ್ಟು ಮಂದಿ ಬಲಿಯಾಗಬೇಕೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications