ಅಣ್ಣಾ ಬೇಡಿಕೆಗಳಿಗೆ ಒಪ್ಪಿಗೆ, ಇಂದು ಉಪವಾಸ ಅಂತ್ಯ

Govt accepts Anna's demands
ನವದೆಹಲಿ, ಆ. 27 : ಲೋಕಪಾಲ ಮಸೂದೆ ಮಂಡನೆಗೆ ಸಂಬಂಧಿಸಿದಂತೆ 12 ದಿನಗಳಿಂದ ನಿರಾಹಾರ ಉಪವಾಸ ಮಾಡುತ್ತಿರುವ 74 ವರ್ಷದ ಅಣ್ಣಾ ಹಜಾರೆಯವರು ಮುಂದಿಟ್ಟಿದ್ದ ಮೂರು ಬೇಡಿಕೆಗಳಿಗೆ ಕೇಂದ್ರ ಸರಕಾರ ತಾತ್ವಿಕವಾಗಿ ಒಪ್ಪಿದ್ದು, ಇಂದು ಸಂಜೆ ಅಣ್ಣಾ ಆಮರಣಾಂತ ಉಪವಾಸ ಸತ್ಯಾಗ್ರಹ ಮುರಿಯುವ ಸಂಭವನೀಯತೆಯಿದೆ.

ಆ ಶಿಫಾರಸುಗಳು

* ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕವಾಗಬೇಕು.
* ಸರಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಅನುಷ್ಠಾನಕ್ಕೆ ತರಬೇಕು.
* ಕೆಳಹಂತದ ಅಧಿಕಾರಿಗಳನ್ನೂ ಲೋಕಪಾಲ ವ್ಯಾಪ್ತಿಗೆ ತರಬೇಕು.

ಈ ಮೂರು ಶಿಫಾರಸುಗಳನ್ನು ಒಪ್ಪುವರೆಗೆ ಉಪವಾಸ ಕೈಬಿಡುವುದಿಲ್ಲ ಎಂದು ಅಣ್ಣಾ ಹಜಾರೆ ಹಠ ಹಿಡಿದು ಕುಳಿತಿದ್ದರು. ಈ ಶಿಫಾರಸುಗಳನ್ನು ಬಿಜೆಪಿ ಕೂಡ ಬೆಂಬಲಿಸಿದೆ. ಇದರಿಂದ ಬೆಚ್ಚಿಬಿದ್ದಿದ್ದ ಯುಪಿಎ ಸರಕಾರ ಶನಿವಾರ ಜನ ಲೋಕಪಾಲ ಮಸೂದೆ ಕುರಿತಂತೆ ನಡೆದ ಚರ್ಚೆಯಲ್ಲಿ ತಾತ್ವಿಕವಾಗಿ ಒಪ್ಪಿಗೆ ನೀಡಿದೆ.

ಅಣ್ಣಾ ಹಜಾರೆಯವರು ಇಂದು ಸಂಜೆ 6 ಗಂಟೆಗೆ ಉಪವಾಸಕ್ಕೆ ಕೊನೆ ಹಾಡಲಿದ್ದಾರೆ. ಇದು ಅಣ್ಣಾ ಹಜಾರೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಸಿಕ್ಕ ಜಯ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ್ ಗುರೂಜಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+