'ಕೈ' ಎತ್ತಿದ ಸರಕಾರ; ಅಣ್ಣಾ ಗತಿಯೇನು?

ಇದಕ್ಕೆ ಕಾರಣ ಬುಧವಾರ ರಾತ್ರಿ ನಡೆದ ಸರ್ವ ಪಕ್ಷ ಸಭೆ ಒಮ್ಮತ ನಿರ್ಧಾರಕ್ಕೆ ಬಾರದಿರುವುದು. ಮತ್ತು ನಮ್ಮ ಕೈಯಲ್ಲೇನೂ ಇಲ್ಲ. ಆಣ್ಣಾ ಉಪವಾಸವನ್ನು ನಿಲ್ಲಿಸುವುದು ನಿಮಗೇ ಬಿಟ್ಟ ವಿಚಾರ ಎಂದು ಸರಕಾರ ಟೀಂ ಅಣ್ಣಾಗೆ ಸ್ಪಷ್ಟಪಡಿಸಿರುವುದು ದುಗುಡವನ್ನು ಹೆಚ್ಚಿಸಿದೆ.
ಸರಕಾರವೇನೋ ಅಣ್ಣಾ ಹೇಳಿದಂತೆ ಈಗಿರುವ ಸರಕಾರಿ ಲೋಕಪಾಲ ಕರಡನ್ನು ವಾಪಸ್ ತೆಗೆದುಕೊಂಡಿದೆ. ಆದರೆ ಹೊಸದನ್ನು ರಚಿಸಿ, ಅದನ್ನು ಮಂಡಿಸುವುದು ನಿಂತ ಘಳಿಗೆಯಲ್ಲೇ ಆಗುವ ವಿಚಾರವಲ್ಲ. ಅದಿನ್ನು ಮುಂದಿನ ವಾರಕ್ಕೆ ಮುಂದೂಡುತ್ತದೆ. ಅಲ್ಲಿಯವರೆಗೆ ಅಣ್ಣಾ ಗತಿಯೇನು!? ಎಂಬುದು ಗುರುವಾರ ಬೆಳಗ್ಗೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಇದೇ ರೀತಿ ಭ್ರಷ್ಟಾಚಾರವನ್ನು ವಿರೋಧಿ ಉಪವಾಸ ಕುಳಿತಿದ್ದ ಬಾಬಾ ರಾಮ್ ದೇವ್ ಅವರನ್ನು ದೆಹಲಿ ಪೊಲೀಸರು ಮಧ್ಯರಾತ್ರಿ ಎತ್ತಿಹಾಕಿಕೊಂಡು ಹೋಗಿದ್ದು ಜನಮಾನಸದಲ್ಲಿ ಇನ್ನೂ ಉಳಿದಿದೆ. ಈಗ ಅದೇ ಪೊಲೀಸರು ಅಣ್ಣಾ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಅಣ್ಣಾಗೆ ಬಲವಂತವಾಗಿ ಉಪವಾಸವನ್ನು ನಿಲ್ಲಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ.












Click it and Unblock the Notifications