ಸ್ಥಾಯಿ ಸಮಿತಿ ಎಂದರೇನು, ಅದರ ಕಾರ್ಯವ್ಯಾಪ್ತಿ ಏನು?

ಈ ಹಿನ್ನೆಲೆಯಲ್ಲಿ Parliamentary Standing committee ಕಾರ್ಯವೈಖರಿ ಬಗ್ಗೆ ಒಂದಷ್ಟು ಮಾಹಿತಿ:
ಸ್ಥಾಯಿ ಸಮಿತಿ ಎಂದರೇನು?: ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ಸಂಸದೀಯ ಸಮಿತಿ ಎನ್ನಲಾಗುತ್ತದೆ. ಇದರಲ್ಲಿ 2 ವಿಧ. ಒಂದು ತಾತ್ಕಾಲಿಕ ಸಮಿತಿ. ಇದು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆ ಬಳಿಕ ಸಮಿತಿ ತಂತಾನೆ ವಿಸರ್ಜನೆಗೊಳ್ಳುತ್ತದೆ. ಇನ್ನೊಂದು ಸ್ಥಾಯಿ ಸಮಿತಿ.
ಪ್ರತಿ ಸ್ಥಾಯಿ ಸಮಿತಿ ತಲಾ 31 ಸದಸ್ಯರನ್ನು ಹೊಂದಿರುತ್ತದೆ. ಸದನದಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಸಮಿತಿಯಲ್ಲಿ ಆಯಾ ಪಕ್ಷಗಳಿಗೆ ಸ್ಥಾನ ನಿಗದಿ ಮಾಡಲಾಗಿರುತ್ತದೆ. ಇದರ ಸದಸ್ಯರನ್ನು ಕಾಲಾನುಕಾಲಕ್ಕೆ ನೇಮಿಸಲಾಗುತ್ತದೆ. ಸಂಸತ್ತಿನಲ್ಲಿ ಒಟ್ಟು 24 ಸ್ಥಾಯಿ ಸಮಿತಿಗಳಿವೆ.
ಈ ಪೈಕಿ 8 ರಾಜ್ಯಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮತ್ತು 16 ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಇರುತ್ತವೆ. ಗೃಹ, ಹಣಕಾಸು, ವಿದೇಶಾಂಗ ವ್ಯವಹಾರಗಳ ಕುರಿತಾದ ಸಮಿತಿಯ ಅಧ್ಯಕ್ಷತೆಯನ್ನು ಸಾಮಾನ್ಯವಾಗಿ ವಿರೋಧ ಪಕ್ಷದ ಹಿರಿಯ ನಾಯಕರಿಗೆ ನೀಡಲಾಗುತ್ತದೆ.
ಲೋಕಪಾಲ ಕುರಿತ ಸ್ಥಾಯಿ ಸಮಿತಿ: ಲೋಕಪಾಲ ಕುರಿತು ಪರಿಶೀಲನೆ ನಡೆಸಲಿರುವ ಸ್ಥಾಯಿ ಸಮಿತಿಯಲ್ಲಿ 31 ಸದಸ್ಯರು ಇದ್ದಾರೆ. ಈ ಪೈಕಿ 10 ರಾಜ್ಯಸಭಾ ಮತ್ತು 21 ಲೋಕಸಭಾ ಸದಸ್ಯರು. ಆದರೆ ಈ ಪೈಕಿ 6 ಸ್ಥಾನ ಖಾಲಿ ಇವೆ.
ಸಮಿತಿ ಕಾರ್ಯನಿರ್ವಹಣೆ: ಸಮತಿ ತನ್ನ ಬಳಿಗೆ ಬಂದಿರುವ ಕರಡು ಮಸೂದೆ ಬಗ್ಗೆ ಚರ್ಚಿಸುತ್ತದೆ. ತಜ್ಞರು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸುತ್ತೆ. ಅಂತಿಮವಾಗಿ ಈ ಕುರಿತ ವರದಿ ಸಿದ್ಧಪಡಿಸುತ್ತದೆ. ಸಮಿತಿಯ ನಿರ್ಧಾರ ಬಹುತೇಕ ಸಹಮತದ ಮೂಲಕವೇ ಅಂಗೀಕಾರವಾಗಬೇಕು ಎನ್ನುತ್ತದೆ ಕಾನೂನು.
ಒಂದು ವೇಳೆ ಸಮಿತಿಯ ಯಾವುದೇ ಸದಸ್ಯ ಮಸೂದೆಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನೂ ವರದಿಯಲ್ಲಿ ದಾಖಲಿಸುವುದು ಕಡ್ಡಾಯ. ಈ ವರದಿಯ ಶಿಫಾರಸನ್ನು ಒಪ್ಪಲೇಬೇಕೆಂಬ ಕಾನೂನು ಇಲ್ಲ. ಸ್ಥಾಯಿ ಸಮಿತಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಬಹುಮತದ ಆಧಾರದಲ್ಲೇ ಆಗಿರುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications