Get Updates
Get notified of breaking news, exclusive insights, and must-see stories!

ಸಚಿವ ಸಂಪುಟಕ್ಕೆ ರೆಡ್ಡಿಗಳ ಸೇರ್ಪಡೆ, ಆಚಾರ್ಯರೇ ದಿಕ್ಕು?

Sadananda Gowda on Cabinet Expansion
ಬಾಗಲಕೋಟೆ, ಆ.22: ರಾಜ್ಯ ಸಂಪುಟ ವಿಸ್ತರಣೆ ಏನಿದ್ದರೂ ಅಣ್ಣಾ ಹಜಾರೆ ಅವರ ಹೋರಾಟ ಪೂರ್ಣಗೊಂಡ ನಂತರವಷ್ಟೇ. ಸಂಪುಟಕ್ಕೆ ರೆಡ್ಡಿಗಳ ಸೇರ್ಪಡೆ ಬಗ್ಗೆ ಕಾನೂನು ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಡಿವಿಎಸ್ ಅವರು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಕೃಷ್ಣಾನದಿಗೆ ಬಾಗಿನ ಅರ್ಪಿಸಲು ಆಲಮಟ್ಟಿಗೆ ತೆರಳುತ್ತಿದ್ದರು.

ಲೋಕಾಯುಕ್ತ ವರದಿ ಶಿಫಾರಸ್ಸಿನಲ್ಲಿ ಅಡಕವಾಗಿರುವ ಅಂಶಗಳ ಪ್ರಕಾರ ಗಣಿರೆಡ್ಡಿಗಳ ಕ್ಯಾಂಪಿನ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬಹುದೆ? ಬೇಡವೇ? ಎನ್ನುವ ವಿಚಾರವನ್ನು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಿ ವರದಿ ಕೊಡಬೇಕೆಂದು ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯರಿಗೆ ಸಿಎಂ ಕೇಳಿಕೊಂಡಿದ್ದಾರೆ.

ರಾಜ್ಯಪಾಲರು ಅಡ್ಡಿ?: ರೆಡ್ಡಿ ಸೋದರರ ಸಂಪುಟ ಸೇರ್ಪಡೆಗೆ ಬಿಜೆಪಿ ಅಧ್ಯಕ್ಷ ಗಡ್ಕರಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಸದಾನಂದ ಗೌಡರು ಈ ಕುರಿತಂತೆ ಲೀಗಲ್ ಒಪೀನಿಯನ್ ಕೇಳಿ ನಂತರ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಒಂದು ವೇಳೆ ಕರುಣಾಕರ ರೆಡ್ಡಿ ಮತ್ತು ಶ್ರಿ ರಾಮಲುವನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿವಿ ಆಚಾರ್ಯುರು ಗ್ರೀನ್ ಸಿಗ್ನಲ್ ಕೊಟ್ಟರೂ ರಾಜ್ಯಪಾಲರು ಅವರಿಗೆ ಪ್ರಮಾಣವಚನ ಬೋಧಿಸಲು ಒಪ್ಪಲಾರರು ಎನ್ನುವ ಸುದ್ದಿ ಇದೆ.

ಹಿಂದೊಮ್ಮೆ ರೆಡ್ಡಿಗಳ ವಿರುದ್ಧ ಸ್ವತಃ ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರಲ್ಲದೇ, ಬಳ್ಳಾರಿ ತ್ರಿಮೂರ್ತಿಗಳನ್ನು ಸಂಪುಟದಿಂದ ಕೈಬಿಡಲು ಯಡಿಯೂರಪ್ಪಗೆ ಒತ್ತಡ ಹಾಕಿದ್ದರು. ಇದೀಗ ಮತ್ತೆ ಅವರನ್ನು ಮಂತ್ರಿ ಆಗುವುದಕ್ಕೆ ಹಂಸರಾಜ್ ಭಾರಧ್ವಾಜರು ಅಡ್ಡಗಾಲು ಹಾಕುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+