ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾ ಅಕ್ರಮ ಗಳಿಕೆ: 3 ವರಿಷ್ಠರ ಜತೆ ಯಡಿಯೂರಪ್ಪ ಹಂಚಿಕೆ

By Srinath
|
Google Oneindia Kannada News

bhadra-project-bsy-high-command-gets-share-hdk
ಮೈಸೂರು, ಆಗಸ್ಟ್ 16: 'ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬ ವರ್ಗದಿಂದ ಬಿಜೆಪಿಯ ಮೂವರು ವರಿಷ್ಠರಿಗೆ ಚೆಕ್ ಮೂಲಕ ಹಣ ಸಂದಾಯವಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

'2004-05ರಲ್ಲಿ ಕಾಮಗಾರಿ ಆರಂಭವಾದಾಗ 500 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿತ್ತು. ಪ್ರಸ್ತುತ ಕಾಮಗಾರಿ ವೆಚ್ಚವನ್ನು 1020 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ 14 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿರುವ ಯಡಿಯೂರಪ್ಪ ಕೇಂದ್ರದ ಮೂವರು ಪ್ರಭಾವಿ ವರಿಷ್ಠರಿಗೂ ಹಣ ನೀಡಿದ್ದಾರೆ' ಎಂದಿದ್ದಾರೆ ಎಚ್ ಡಿ ಕೆ.

'ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಈ ಕುರಿತು ಆಳವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಾನೇ ಆ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

English summary
In Bhadra Upper irrigation project Karnataka ex Chief Minister B.S. Yeddyurappa the case has given ill gotten money to BJP High Command also claimed HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X