ಕೇಂದ್ರ ಸರ್ಕಾರದಿಂದ ಅಣ್ಣಾ ಹಜಾರೆಗೇ ಭ್ರಷ್ಟ ಪಟ್ಟ

"ಶುದ್ಧ ಆಚಾರ, ವಿಚಾರ ಹೊಂದಿದ ವ್ಯಕ್ತಿ" ಎಂದೇ ಖ್ಯಾತರಾಗಿರುವ ಅಣ್ಣಾ ವಿರುದ್ಧ ಕಾಂಗ್ರೆಸ್ ವೈಯಕ್ತಿಕ ದಾಳಿಗಿಳಿದಿದೆ. ಅಣ್ಣಾ ಅವರಿಗೆ ಸೇರಿದ ಟ್ರಸ್ಟ್ ವಿರುದ್ಧ ನ್ಯಾ. ಪಿ.ಬಿ. ಸಾವಂತ್ ಸಮಿತಿಯ ವರದಿಯಲ್ಲಿ ಮಾಡಲಾದ ಕೆಲ ಭ್ರಷ್ಟಾಚಾರ ಆರೋಪಗಳನ್ನು ಈಗ ಕೆದಕುವ ಮೂಲಕ ಬಾಬಾ ರಾಮ್ ದೇವ್ ಮೇಲೆ ಪ್ರಯೋಗಿಸಿದ್ದ ಅಸ್ತ್ರವನ್ನೇ ಕಾಂಗ್ರೆಸ್ ಪ್ರಯೋಗಿಸಿರುವುದು ಗೋಚರಿಸುತ್ತಿದೆ.
ಅಣ್ಣಾ ವಿರುದ್ಧ ಕಾಂಗ್ರೆಸ್ ಆರೋಪಗಳು:
* 2003ರಲ್ಲಿ ಪಿ.ಬಿ.ಸಾವಂತ್ ಆಯೋಗವು ಮಹಾರಾಷ್ಟ್ರದ ರಾಳೇಗಣ ಸಿದ್ಧಿಯಲ್ಲಿರುವ ಅಣ್ಣಾ ಹಜಾರೆಯವರ "ಹಿಂದ್ ಸ್ವರಾಜ್ ಟ್ರಸ್ಟ್ ಸೇರಿದಂತೆ 4 ಟ್ರಸ್ಟ್ ಗಳ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಟ್ರಸ್ಟ್ ಗಳಲ್ಲಿಯ ಹಣದ ಅಪವ್ಯಯ, ವ್ಯತ್ಯಾಸಗಳ ಬಗ್ಗೆ ಅಣ್ಣಾ ಹಜಾರೆಯ ಮೇಲೂ ಆರೋಪವಿದ್ದರೂ ಅದಕ್ಕೆ ಅಣ್ಣಾ ಯಾವುದೇ ಉತ್ತರ ನೀಡಿಲ್ಲ.
* ಅಣ್ಣಾ ಹಜಾರೆ ಹುಟ್ಟುಹಬ್ಬ ಆಚರಣೆಗೆ ಟ್ರಸ್ಟಿನ 2.2 ಲಕ್ಷ ರು. ದುರ್ಬಳಕೆಯಾಗಿದೆ.
* ಅವರ ಯಾದವ ಬಾಬಾ ಶಿಕ್ಷಣ ಮಂಡಳಿ ಕಳೆದ 20 ವರ್ಷಗಳಿಂದ ಲೆಕ್ಕಪತ್ರ ಸಲ್ಲಿಸಿಲ್ಲ.
* ಅಣ್ಣಾ ಹಜಾರೆ ನೇತೃತ್ವ ಭ್ರಸ್ಟಾಚಾರ ವಿರೋಧಿ ಜನಾದೋಲನ ಸಂಸ್ಥಾನ ಸಂಸ್ಥೆ ಜನರನ್ನು ಬೆದರಿಸುವುದು, ಹಿಂಸಿಸುವುದು ಮುಂತಾದ ಕಾಯಕದಲ್ಲಿ ತೊಡಗಿದೆ.
* ಅಣ್ಣಾ ಸೇವೆಯಲ್ಲಿದ್ದಾಗ ವಿವರ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿರುವ ಅರ್ಜಿಗೆ ಈವರೆಗೂ ಅವರು ವಿವರ ನೀಡಿಲ್ಲ; ಆಯೋಗದ ನಿಯಮ ಪಾಲಿಸಿಲ್ಲ
ಕಾಂಗ್ರೆಸ್ ಈ ಎಲ್ಲಾ ಆಪಾದನೆಗಳು ಸುಳ್ಳು ಎಂದಿರುವ ಅಣ್ಣಾ ಹಜಾರೆ, "ಸಾವಂತ್ ವರದಿಯಲ್ಲಿ ನನ್ನ ಹೆಸರೇ ಇಲ್ಲ. ನನ್ನ ಟ್ರಸ್ಟ್ ಆಸ್ತಿಯನ್ನು 24 ಗಂಟೆಯೊಳಗೆ ಬಹಿರಂಗ ಮಾಡುವೆ. ನಾನು ನಿರ್ದೋಷಿ ಎಂದು ಸಾಬೀತಾಗುವವರೆಗೂ ಉಪವಾಸ ಮಾಡುವೆ" ಎಂದು ಅಣ್ಣಾ ಅದಕ್ಕೆ ಪ್ರತಿಕ್ರಯಿಸಿದ್ದಾರೆ.
ಈ ಅಣ್ಣಾ ಹಜಾರೆ-ಕೇಂದ್ರ ಸರ್ಕಾರದ ವೈಮನಸ್ಯ ಈಗ ಹೋರಾಟದ ಹಾದಿಯಲ್ಲಿ ಹೊಸ ತಿರುವು ಪಡೆಯಲಿದ್ದು ಈ ವಿಷಯವೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications