ದೇವ ಪ್ರಶ್ನೆ ಇಂದು ಮುಕ್ತಾಯ: ಕಾದಿದೆ ರಾಷ್ಟ್ರಕ್ಕೆ ಆಪತ್ತು

ಈ ಮಧ್ಯೆ, ಕಳೆದ ಎರಡು ದಿನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಧಾರ್ಮಿಕ ವಿಧಿಯಿಂದ ಸ್ಪಷ್ಟಗೊಡಿರುವ ಅಂಶವೆಂದರೆ ಅನಂತ ಪದ್ಮನಾಭ ಸ್ವಾಮಿ ಸಂಪತ್ತನ್ನು ದೇವಸ್ಥಾನದ ಜಾಗದಿಂದ ಯಾವುದೇ ಕಾರಣಕ್ಕೂ ಹೊರ ಸಾಗಿಸಬಾರದು ಎಂಬುದು.
'ಅನಂತ ಸಂಪತ್ತನ್ನು ಇಲ್ಲಿಂದ ಹೊರತೆಗೆದರೆ ಭಾರಿ ವಿನಾಶ ಕಾದಿದೆ. ದೇವಸ್ಥಾನದ ಪಾವಿತ್ರ್ಯತೆಗೂ ಧಕ್ಕೆಯೊದಗಲಿದೆ' ಎಂದು ಪ್ರಧಾನ ದೈವಜ್ಞ ಮಧುರ ನಾರಾಯಣ ರಂಗಾಭಟ್ ಸುದ್ದಿಗಾರರಿಗೆ ಮಂಗಳವಾರ ರಾತ್ರಿ ತಿಳಿಸಿದ್ದಾರೆ. ಇನ್ನು, ಬಿ ಉಗ್ರಾಣ ಸರಿಯಾಗಿ ಗರ್ಭಗುಡಿಯ ಕೆಳಗೇ ಇರುವುದರಿಂದ ಆ ಉಗ್ರಾಣದ ಬಾಗಿಲು ತೆಗೆದರೆ ಅಪಾಯ ಕಟ್ಟಿಟ್ಟಬುತ್ತಿ. ಈ ಬಗ್ಗೆ ಜಾಗ್ರತೆ ವಹಿಸುವುದು ಒಳಿತು ಎಂದೂ ಅವರು ಎಚ್ಚರಿಸಿದ್ದಾರೆ. ಗರ್ಭಗುಡಿಯಲ್ಲಿ ಶಯನ ಭಂಗಿಯಲ್ಲಿರುವ ವಿಷ್ಣು ಮೂರ್ತಿಯ ವಿಗ್ರಹ ಇಲ್ಲಿದೆ.
ಇದುವರೆಗಿನ ಅಷ್ಟಮಂಗಲ (ದೇವ ಪ್ರಶ್ನೆ) ಪ್ರಶ್ನೆ ವಿಧಿಯಿಂದ ಮತ್ತೊಂದು ಆತಂಕಕಾರಿ ವಿಷಯಯೂ ಹೊರಬಿದ್ದಿದೆ. ಏನೆಂದರೆ, ಅನಂತ ಸಂಪತ್ತು ಹೊರತೆಗೆದ ಕಾಲದಲ್ಲಿ ದೇವಸ್ಥಾನದ ಧಾರ್ಮಿಕ ಆಚರಣೆಗಳಲ್ಲಿ ಭಾರಿ ನ್ಯೂನತೆಗಳು ಕಂಡುಬಂದಿವೆ. ಇದು ರಾಷ್ಟ್ರವನ್ನೂ ಕಾಡಲಿದೆ ಎಂದು ಜ್ಯೋತಿಷಿಯೂ ಆದ ದೈವಜ್ಞ ರಂಗಾಭಟ್ ಹೇಳಿದ್ದಾರೆ.
ಬುಧವಾರ ನಿರ್ಣಾಯಕ: ಮೂರನೆಯ ದಿನವಾದ ಇಂದು (ಬುಧವಾರ) ಈ ಎರಡು ದಿನಗಳಲ್ಲಿ ದೇವ ಪ್ರಶ್ನೆ ವಿಧಿಯಿಂದ ತಿಳಿದುಬಂದಿರುವ ಅಂಶಗಳನ್ನೆಲ್ಲ ಒಟ್ಟುಗೂಡಿಸಿ 'ಪರಿಹಾರ ಕ್ರಿಯೆ' ಗಳನ್ನು ಸೂಚಿಸುವುದಾಗಿ ಅವರು ತಿಳಿಸಿದ್ದಾರೆ. ದೇವಸ್ಥಾನದ ಪೂರ್ವ ಭಾಗದಲ್ಲಿರುವ 'ನಾಟಕಶಾಲೆ'ಯಲ್ಲಿ ದೇವ ಪ್ರಶ್ನೆ ವಿಧಿ ವೀಧಾನಗಳು ನಡೆದಿವೆ.
ಗಮನಾರ್ಹವೆಂದರೆ, ಅನಂತ ಸಂಪತ್ತು ಮರು ಲೆಕ್ಕಾಚಾರಕ್ಕಾಗಿ ಸುಪ್ರೀಂಕೋರ್ಟ್ ನಿಯೋಜಿಸಿರುವ ಐದು ಸದಸ್ಯರ ಉನ್ನತ ಸಮಿತಿ ಮುಂದಿನ ಹೆಜ್ಜೆ ಏನು ಎಂಬುದನ್ನು ನಿರ್ಧರಿಸಲು ಇಂದು ಸಭೆ ಸೇರಲಿದೆ. ದೆಹಲಿಯ ನ್ಯಾಷನಲ್ ಮ್ಯೂಸಿಯಂನ ನಿರ್ದೇಶಕ ಸಿವಿ ಆನಂದ ಬೋಸ್ ನೇತೃತ್ವದ ಸಮಿತಿ ಕಳೆದ ವಾರವೂ ಸಭೆ ಸೇರಿತ್ತು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications