Get Updates
Get notified of breaking news, exclusive insights, and must-see stories!

ವಿಪ್ ಸ್ಥಾನಕ್ಕೆ ಗುಡ್ ಬೈ ಹೇಳಿದ ಜೀವರಾಜ್ ಗೆ ಸಚಿವ ಸ್ಥಾನ?

DN Jeevaraj resigns Chief whip
ಬೆಂಗಳೂರು ಆ.9: ಹಿಸ್ಟರಿ ರೀಪಿಟ್ಸ್.. ಶೃಂಗೇರಿ ಶಾಸಕ ಡಿಎನ್ ಜೀವರಾಜ್ ಅವರು ಮತ್ತೊಮ್ಮೆ ಮುಖ್ಯಸಚೇತಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗಲೂ ವಿಪ್ ಸ್ಥಾನದಿಂದ ಕೆಳಗಿಳಿದಿದ್ದರು. ಎರಡೂ ಬಾರಿಯೂ ಸಚಿವ ಸ್ಥಾನದ ಆಕಾಂಕ್ಷಿ ಹೊತ್ತು ವಿಪ್ ಸ್ಥಾನವನ್ನು ಬಿಟ್ಟು ಬಂದಿದ್ದರು.

ಎಂಎಲ್ ಎ ಜೀವರಾಜ್ ಅವರು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಅವರ ಕಚೇರಿಗೆ ತಲುಪಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ರಾಜೀನಾಮೆಯನ್ನು ನಂತರ ಪರಿಶೀಲಿಸಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿದೆ.

ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ವಿಷಯ ಖಾತ್ರಿಯಾದ ಮೇಲೆ ಬೇಸರಗೊಂಡು ವಿಪ್ ಸ್ಥಾನದಿಂದ ಹೊರ ನಡೆದಿದ್ದರು. ಆದರೆ, ಈಗ ಸಚಿವ ಸ್ಥಾನ ಸಿಗುವ ಭರವಸೆ ಸಿಕ್ಕ ಮೇಲೆಯೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಈ ಮೂಲಕ ಜಿಲ್ಲೆ ಮತ್ತೊಬ್ಬ ಸಚಿವ ಸ್ಥಾನ ಅಕಾಂಕ್ಷಿ ಸಿ.ಟಿ. ರವಿಗೆ ಮತ್ತೊಮ್ಮೆ ಮುಖಭಂಗವಾಗುವುದು ನಿಶ್ಚಿತವಾಗಿದೆ. ಜೀವರಾಜ್ ಗೆ ಸಚಿವ ಸ್ಥಾನ ಲಭಿಸಿದರೆ ಶೆಟ್ಟರ್ ಬಣದಲ್ಲಿ ಕಾಣಿಸಿಕೊಂದ ಸಿ.ಟಿ ರವಿ ಮತ್ತೊಮ್ಮೆ ಬಿಜೆಪಿ ವಕ್ತಾರನಾಗೇ ಉಳಿಯಬೇಕಾಗುತ್ತದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಮುಂದಿನ ಸಂಪುಟ ವಿಸ್ತರಣೆ ರೆಡ್ಡಿ ಸೋದರರ ಅಣತಿಯಂತೆ ನಡೆಯುವ ಸಾಧ್ಯತೆಯಿದ್ದು, ಸೋಮಣ್ಣ ಇಳಿಯದಿದ್ದರೆ, ಕರುಣಾಕರ ರೆಡ್ಡಿಗಾದರೂ ಸ್ಥಾನ ಕಲ್ಪಿಸಲು ಯತ್ನ ನಡೆದಿದೆ. ರವಿ ಕೂಡಾ ರೆಡ್ಡಿ ಬಣದ ಸಹಾಯದಿಂದ ಕ್ಯಾಬಿನೆಟ್ ಸೇರುವ ತವಕದಲ್ಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+