ಕುಂಬಳಗೋಡಿನಲ್ಲಿ ಆನೆಯ ಆಕ್ರೋಶಕ್ಕೆ ಓರ್ವ ಬಲಿ

ಮರಿಯಪ್ಪ (40) ಎಂಬುವವರು ಆನೆಯ ಆಕ್ರೋಶಕ್ಕೆ ಬಲಿಯಾದವರು. ಬೆಳಿಗ್ಗೆ 9 ಗಂಟೆಗೆ ಬೈಕ್ ಮೇಲೆ ಕಚೇರಿಗೆ ಮರಿಯಪ್ಪ ತೆರಳುತ್ತಿದ್ದಾಗ ಆನೆ ದಾಳಿ ಮಾಡಿ ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ. ಪೊಲೀಸರು ಈಗ ಆನೆಯ ಹುಡುಕಾಟದಲ್ಲಿದ್ದಾರೆ.
ಜನತೆಯ ಅಕ್ರೋಶ : ಮೈಸೂರಿನಲ್ಲಿ ಸತ್ತಿದ್ದ ರೇಣುಕಾಪ್ರಸಾದ್ ಅವರಿಗೆ ಸರಕಾರ 5 ಲಕ್ಷ ರು. ಘೋಷಿಸಿತ್ತು. ಆದರೆ, ಮರಿಯಪ್ಪನವರಿಗೆ ಕೇವಲ 2 ಲಕ್ಷ ರು. ಘೋಷಿಸಲಾಗಿದೆ. ಎರಡು ಘಟನೆಗಳು ಒಂದೇ ರೀತಿಯವಾಗಿದ್ದರೂ ಏಕೀ ತಾರತಮ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications