ಕುಂಬಳಗೋಡಿನಲ್ಲಿ ಆನೆಯ ಆಕ್ರೋಶಕ್ಕೆ ಓರ್ವ ಬಲಿ

Rogue elephant kills one person near Kumbalagodu
ಬೆಂಗಳೂರು, ಆ. 9 : ಮೈಸೂರಿನಲ್ಲಿ ನಡೆದ ಘಟನೆಯ ಮಾದರಿಯಲ್ಲೇ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡಿನ ಕೆಂಚನಪಾಳ್ಯದಲ್ಲಿ ಓರ್ವನನ್ನು ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಆನೆಯೊಂದು ಕೊಂದು ಹಾಕಿದ ಘಟನೆ ಮಂಗಳವಾರ ಜರುಗಿದೆ.

ಮರಿಯಪ್ಪ (40) ಎಂಬುವವರು ಆನೆಯ ಆಕ್ರೋಶಕ್ಕೆ ಬಲಿಯಾದವರು. ಬೆಳಿಗ್ಗೆ 9 ಗಂಟೆಗೆ ಬೈಕ್ ಮೇಲೆ ಕಚೇರಿಗೆ ಮರಿಯಪ್ಪ ತೆರಳುತ್ತಿದ್ದಾಗ ಆನೆ ದಾಳಿ ಮಾಡಿ ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ. ಪೊಲೀಸರು ಈಗ ಆನೆಯ ಹುಡುಕಾಟದಲ್ಲಿದ್ದಾರೆ.

ಜನತೆಯ ಅಕ್ರೋಶ : ಮೈಸೂರಿನಲ್ಲಿ ಸತ್ತಿದ್ದ ರೇಣುಕಾಪ್ರಸಾದ್ ಅವರಿಗೆ ಸರಕಾರ 5 ಲಕ್ಷ ರು. ಘೋಷಿಸಿತ್ತು. ಆದರೆ, ಮರಿಯಪ್ಪನವರಿಗೆ ಕೇವಲ 2 ಲಕ್ಷ ರು. ಘೋಷಿಸಲಾಗಿದೆ. ಎರಡು ಘಟನೆಗಳು ಒಂದೇ ರೀತಿಯವಾಗಿದ್ದರೂ ಏಕೀ ತಾರತಮ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+