ತಾಯಿ ಸುಷ್ಮಾ ವರಮಹಾಲಕ್ಷ್ಮಿ ವ್ರತಕ್ಕೆ ಬರ್ತಾರಾ!?
ಬಳ್ಳಾರಿ,
ಆಗಸ್ಟ್ 1: ಲೋಕಾಯುಕ್ತ 'ಗಣಿಗಾರಿಕೆ'ಯಿಂದ ರೆಡ್ಡಿ ಸೋದರರ ಶಾಂತಿ, ನೆಮ್ಮದಿ ಸ್ಫೋಟಗೊಂಡಿದೆ. ಯಜಮಾನ್ ಯಡಿಯೂರಪ್ಪ ಅವರಂತೇ ತಾವೂ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಇನ್ನೇನು ಈಗ್ಲೋ ಆಗ್ಲೋ ಅಷ್ಟೆ. id="toptextpromo">ಸೋ,
ಅದಿರಿನಿಂದ ಈ ರೀತಿ ಅಧೀರರಾಗಿರುವ ಚಿನ್ನದಂತಹ ಗಣಿ ಧಣಿಗಳು ಪ್ರತಿ ವರ್ಷ ತಪ್ಪದೆ ನಡೆಸಿಕೊಡುತ್ತಿರುವ ವರಮಹಾಲಕ್ಷ್ಮಿ ವ್ರತಾಚರಣೆಗೆ ತಾಯಿ ಸುಷ್ಮಾ ಸ್ವರಾಜ್ ಅವರೂ ತಪ್ಪದೆ ಭಾಗವಹಿಸುತ್ತಿದ್ದರು. ಅದಕ್ಕಾಗಿ ಗಣಿ ಧಣಿಗಳ ವಿಶೇಷ ಹೆಲಿಕಾಪ್ಟರಿನಲ್ಲಿ ಬಂದು ಹೋಗುತ್ತಿದ್ದರು. ತವರಿನವರು ಕೊಡುತ್ತಿದ್ದ ಬಾಗಿನ ತಪ್ಪದೆ ತೆಗೆದುಕೊಂಡು ಹೋಗುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಆಗ
ಅಂದರೆ ಮಹಾಲಕ್ಷ್ಮಿ ಕಾಲುಮುರುಕೊಂಡು ರೆಡ್ಡಿ ಮನೆಗಳಲ್ಲೇ ಬಿದ್ದಿದ್ದಳು. ಆದರೆ ಪರಿಸ್ಥಿತಿ ಈಗ ಹಾಗಿಲ್ಲ. ಕಾಲುಮುರಿದಂತಾಗಿ ಮನೆ ಮಂದಿ ಹೊಸಿಲು ದಾಟುವಂತಿಲ್ಲ. ಪರಿಸ್ಥಿತಿ ಹೀಗಿರುವಾಗಿ ತಾಯಿ ಸುಷ್ಮಾ ಅವರು ಈ ಬಾರಿಯೂ ವರಮಹಾಲಕ್ಷ್ಮಿ ವ್ರತಕ್ಕೆ ಬಳ್ಳಾರಿಗೆ ಬರುತ್ತಾರಾ!? ಎಂಬುದು 16,085 ಕೋಟಿ ರುಪಾಯಿ ಮೌಲ್ಯದ ಪ್ರಶ್ನೆಯಾಗಿದೆ. ಅಂದಹಾಗೆ, ಈ ಬಾರಿ ಆಗಸ್ಟ್ 12ರಂದು ವರಮಹಾಲಕ್ಷ್ಮಿ ಹಬ್ಬ.











Click it and Unblock the Notifications