ಅನ್ಯರು ಮುಮಂ ಆದರೆ ಆಳಲು ಯಡ್ಡಿ ಬಿಡಲ್ಲ : ಯತ್ನಾಳ್

JDS secretary Basavanagowda Patil Yatnal
ಯಾದಗಿರಿ, ಜು. 30 : ಧಾರ್ಮಿಕ ಕ್ಷೇತ್ರವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದ್ದಕ್ಕೆ ಯಡಿಯೂರಪ್ಪ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಜೆಡಿಎಸ್ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಇವತ್ತಿನ ರಾಜಕೀಯ ಬದಲಾವಣೆಗಳನ್ನು ನೋಡಿದರೆ ಯಾವದೇ ಸಂದರ್ಭದಲ್ಲೂ ಚುನಾವಣೆ ನಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಸದಾನಂದ ಗೌಡ, ಅನಂತ ಕುಮಾರ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಲಾರರು. ಅಕಸ್ಮಾತ ಯಾರಾದರೂ ಸಿಎಂ ಆದರೆ ಅವರು ಮೂರು ತಿಂಗಳು ಅಧಿಕಾರ ನಡೆಸಲು ಯಡಿಯೂರಪ್ಪ ಬಿಡುವುದಿಲ್ಲ. ಶೋಭಾ ಕರಂದ್ಲಾಜೆ ಸಿಎಂ ಆದರೆ ಮಾತ್ರ ಯಡಿಯೂರಪ್ಪ ಬೆಂಬಲಿಸುತ್ತಾರೆ ಎಂದು ಯತ್ನಾಳ ಲೇವಡಿ ಮಾಡಿದರು.

ಯಡಿಯೂರಪ್ಪನವರು ಹಠಮಾರಿ ಧೋರಣೆಯನ್ನು ನೋಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಹಾಗೂ ಕೊನೆಯ ಮುಖ್ಯಮಂತ್ರಿ ಆಗಲು ನಿರ್ಧರಿಸಿದಂತೆ ಕಾಣುತ್ತದೆ ಎಂದು ಬಸವನಗೌಡ ಪಾಟೀಲ್ ಯತ್ನಳ ಕಟಕಿಯಾಡಿದರು.

ನಂತರ ಮಾತನಾಡಿದ ಹೈದರಾಬಾದ್ ಕರ್ನಾಟಕ ಜೆಡಿಎಸ್ ಕೋರ್ ಕಮೀಟಿ ಅಧ್ಯಕ ಸೂರ್ಯನಾರಾಯಣ ರೆಡ್ಡಿ. ಬಳ್ಳಾರಿ ರಾಷ್ಟ್ರಮಟ್ಟಲ್ಲಿಯೇ ಅಕ್ರಮ ಗಣಿಗಾರಿಕೆಯಿಂದ ಕೆಟ್ಟ ಹೆಸರು ಪಡೆದಿದೆ. ಜನಾರ್ದನ ರೆಡ್ಡಿ ಮಹಾನ್ ಸುಳ್ಳುಗಾರ. ಅಕ್ರಮ ಗಣಿಗಾರಿಕೆಯಿಂದ ಮೈಸೂರು ಮಹಾರಾಜರ ಅರಮನೆಯಂತೆ ಬಳ್ಳಾರಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+