ಅಕ್ರಮ ಗಣಿ ವರದಿ : ಆರ್ ಎಸ್ ಎಸ್ ಅಸಂತೋಷ

BSY
ಬೆಂಗಳೂರು, ಜುಲೈ26: ಲೋಕಾಯುಕ್ತ 'ಗಣಿಗಾರಿಕೆ' ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ದೂರ ಉಳಿಯಲು ಆರ್ಎಸ್‌ಎಸ್ ತೀರ್ಮಾನಿಸಿದೆ. ಲೋಕಾಯುಕ್ತರ ಅಕ್ರಮ ಗಣಿ ತನಿಖಾ ವರದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನಾಲ್ವರು ಸಚಿವರ ಹೆಸರು ಪ್ರಸ್ತಾಪವಾಗಿದೆ. ಇದು ಆರ್ಎಸ್‌ಎಸ್ ಮುಖಂಡರಲ್ಲಿ ಬೇಸರ ಮೂಡಿಸಿರುವುದೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ 'ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯಕ್ಕಾಗಿ ಕಾಯುವ ಅಗತ್ಯ ಇಲ್ಲ' ಎಂದು ಆರ್ಎಸ್‌ಎಸ್ ಮುಖಂಡರು, ಬಿಜೆಪಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಬೇಕೇ ಅಥವಾ ಅವರನ್ನು ಬದಲಿಸಬೇಕೇ ಎನ್ನುವ ವಿಷಯ ಪಕ್ಷಕ್ಕೆ ಬಿಟ್ಟದ್ದು. ಈ ವಿಷಯದಲ್ಲಿ ಆರ್ಎಸ್‌ಎಸ್ ಮಧ್ಯಪ್ರವೇಶ ಮಾಡುವುದಿಲ್ಲ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಒಳಿತೆನಿಸಿದ್ದನ್ನು ಮಾಡಿ ಎನ್ನುವ ಸಲಹೆಯನ್ನೂ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+