ಯಡಿಯೂರಪ್ಪ ವಿದೇಶ ಪ್ರವಾಸಕ್ಕೆ ಜ್ಯೋತಿಷಿ ಸಲಹೆ ಕಾರಣವಂತೆ

ಯಡಿಯೂರಪ್ಪ ಕುಂಡಲಿ ಪ್ರಕಾರ ದೇಶದಲ್ಲೇ ಉಳಿದರೆ ಸ್ಥಾನ ಹಾಗೂ ಮಾನಹಾನಿಯಾಗುವ ಸಾಧ್ಯತೆ ಹೆಚ್ಚು ಎಂದು ಉತ್ತರ ಕರ್ನಾಟಕ ಮೂಲದ ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದರಂತೆ. ಹೀಗಾಗಿ, ಯಡಿಯೂರಪ್ಪ ಕುಟುಂಬಸಮೇತರಾಗಿ ಮಾರಿಷಸ್ ಪ್ರವಾಸ ಕೈಗೊಂಡರು ಎಂಬುದು ಬಿಜೆಪಿ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ.
ವಿಜಯೇಂದ್ರನ ಪ್ರವಾಸ ಮೊಟಕು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನೂ ಮಾರಿಷಸ್ ಪ್ರವಾಸದಲ್ಲೇ ಇದ್ದರೂ ಅವರ ಪುತ್ರ ವಿಜಯೇಂದ್ರ ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ವಿಜಯೇಂದ್ರ ಅವರು ಲೋಕಾಯುಕ್ತ ವರದಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾನೂನು ಸಲಹೆ ಪಡೆಯಲು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಅಂದಹಾಗೆ, ಯಜಮಾನ್ ಯಡಿಯೂರಪ್ನೋರು ಸೋಮವಾರ ದೆಹಲಿಗೆ ಬಂದು, ರಾಜಕೀಯ ಚದುರಂಗದಾಟದಲ್ಲಿ ತಮ್ಮ ಕಡೆಯ ನಡೆಯಾಡಿ, ಮಂಗಳವಾರ ಅಥವಾ ಬುಧವಾರ ರಾಜಧಾನಿ ಬೆಂಗಳೂರಿಗೆ ವಾಪಸಾಗುವ ಅಂದಾಜಿದೆ.












Click it and Unblock the Notifications