Get Updates
Get notified of breaking news, exclusive insights, and must-see stories!

ಕೇಂದ್ರದಿಂದಲೇ ಟೆಲಿಫೋನ್ ಕದ್ದಾಲಿಕೆ : ಶ್ರೀರಾಮುಲು

B Sriramulu addressing press in Bellary
ಬಳ್ಳಾರಿ, ಜು. 23 : ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಗಣಿಗಾರಿಕೆಯ ಹೊಸ ಲೀಸ್‌ಗಳನ್ನು ನೀಡಿಲ್ಲ ಎಂದು ಸರ್ಟಿಫಿಕೇಟ್ ನೀಡಿರುವ ಶ್ರೀರಾಮುಲು, ತಮ್ಮ ಮತ್ತು ಕೆಲ ಸಚಿವರ ಹೆಸರು ಸೋರಿಕೆಯಾದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಪ್ರಸ್ತಾಪವಾಗಿದ್ದರೂ ಯಾರೂ ರಾಜೀನಾಮೆ ನೀಡುವ ಆಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯನ್ನು ಶೇ. 100ರಷ್ಟು ಒಪ್ಪಲೇಬೇಕು ಎಂದು ಗಣಿ ಹಗರಣದ ಆರೋಪಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಗಣಿ ಹಗರಣ ಕುರಿತು ಲೋಕಾಯುಕ್ತರು ಸಲ್ಲಿಸಲಿರುವ ವರದಿಯಲ್ಲಿ ಎಲ್ಲರ ಬಗ್ಗೆಯೂ ಪ್ರಸ್ತಾಪವಾಗಲಿದೆ, ಬಿಡಿ. ರಾಜಕಾರಣಿಗಳಿಗೆ ಅವಮಾನ - ಗೌರವ - ಸನ್ಮಾನಗಳು ಸಹಜ. ನಾನು ಓಡಿ ಹೋಗುವುದಿಲ್ಲ. ಎಲ್ಲವುದನ್ನೂ ಎದುರಿಸುತ್ತೇನೆ ಎಂದರು.

ಕದ್ದಾಲಿಕೆ ತನಿಖೆಯಾಗಲಿ : ಲೋಕಾಯುಕ್ತರ ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಪಾಲ್ಗೊಂಡಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಟೆಲಿಫೋನ್ ಕದ್ದಾಲಿಕೆ ನಡೆಸಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಸಂತೋಷ ಹೆಗಡೆ ಅವರು ದಕ್ಷರು, ಪ್ರಾಮಾಣಿಕರು. ಇವರು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ವರದಿಯನ್ನೇ ಟೆಲಿಫೋನ್‌ನಲ್ಲಿ ಕದ್ದಾಲಿಕೆ ಮಾಡಿರುವುದು ತನಿಖೆ ಆಗಬೇಕು. ಈ ಪ್ರಕರಣದಲ್ಲಿ ಪಾಲ್ಗೊಂಡಿರುವವರ ಹೆಸರುಗಳು ಬಯಲಾಗಬೇಕು ಎಂದು ಅವರು ಆಗ್ರಹಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+