ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎನ್‌ಎ ಒಲ್ಲೆ ಎನ್ನುವ 'ಪಿತಾಮಹ' ತಿವಾರಿಗೆ ಏನ್ ಮಾಡೋದು!?

By Srinath
|
Google Oneindia Kannada News

ನವದೆಹಲಿ, ಜುಲೈ22: ಪಿತೃತ್ವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡ ಎನ್.ಡಿ. ತಿವಾರಿ ಅವರು ಅದೇ ರಾಗ ಅದೇ ಹಾಡು ಹಾಡುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಗೆ ರಕ್ತದ ಮಾದರಿ ಕೊಡಲು ತಮಗೆ ಸುತರಾಂ ಇಷ್ಟವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಗುರುವಾರ ಪ್ರಮಾಣಪತ್ರ ಸಲ್ಲಿಸಿದ್ದಾರೆ.

'ಸಾರ್ವಜನಿಕ ಬದುಕಿನಲ್ಲಿ ನಾನು ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದೇನೆ. ಇಂಥ ಸುಳ್ಳು ಮೊಕದ್ದಮೆ ಹೂಡುವ ಮೂಲಕ ಅರ್ಜಿದಾರ ನನ್ನ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದ್ದಾನೆ' ಎಂದು ತಿವಾರಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಹಳೆಯದೆಲ್ಲ ಬಿಟ್ಹಾಕಿ, ಆಂಧ್ರ ರಾಜಭವನದಲ್ಲಿ ಈತ ನಡೆಸಿದ ರಾಸಲೀಲೆ ಜನರಿಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆದರೂ ಈ ಪಿತಾಮಹ ನಾನು ಸರ್ವ ಸಾಚಾ ಎನ್ನುತ್ತಿದ್ದಾನಲ್ಲ! ಜನಕ್ಕೆ ಎಲ್ಲಿಂದ ನಗಬೇಕೋ ತಿಳಿಯದಾಗಿದೆ.

'ನನ್ನ ಆತ್ಮಗೌರವ ಉಳಿಸಿಕೊಳ್ಳುವ ಸಲುವಾಗಿ ಮತ್ತು ಒಬ್ಬ ಹಿರಿಯ ನಾಗರಿಕನಾಗಿ ಡಿಎನ್‌ಎ ಪರೀಕ್ಷೆಗೆ ರಕ್ತದ ಮಾದರಿ ಕೊಡಲು ತಯಾರಿಲ್ಲ. ನಾನು 70 ವರ್ಷಗಳಿಂದಲೂ ರಾಜಕೀಯದಲ್ಲಿದ್ದೇನೆ. ಎಂದೂ ನನ್ನ ಮೇಲೆ ಯಾವ ರೀತಿಯ ಆರೋಪಗಳೂ ಕೇಳಿಬಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 31 ವರ್ಷದ ರೋಹಿತ್ ಶೇಖರ್ ಎಂಬುವವರು ತಾವು ತಿವಾರಿ ಅವರ ಮಗ ಎಂದು ಹೇಳಿಕೊಂಡು ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪ್ರಕರಣ ಇದಾಗಿದೆ.

English summary
Veteran Congress leader N D Tiwari sticks to no DNA test. Veteran Congress leader N D Tiwari filed his personal affidavit in the Delhi High Court on Thursday (July 21) and said he cannot be forced to give his blood sample for the DNA test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X