ಮಾನ್ಯ ಲೋಕಾಯುಕ್ತರೇ ಉತ್ತರ ಹೇಳಿ, ತಪ್ಪಿಸಿಕೊಳ್ಬೇಡಿ

ಲೋಕಾಯುಕ್ತರು ಈಗ ನಾಳೆ ವರದಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಅವಧಿ ಮುನ್ನ ವರದಿ ಸೋರಿಕೆ ಹೊಣೆ ಹೊತ್ತಿರುವ ಲೋಕಾಯುಕ್ತರು ರಾಜೀನಾಮೆ ನೀಡುತ್ತಾರೋ ಇಲ್ಲವೋ ಸ್ಪಷ್ಟವಾಗಿಲ್ಲ. ಅಗಸ್ಟ್ 2 ಕ್ಕೂ ಈ ಕೆಳಗಿನ ಕೆಲ ಪ್ರಶ್ನೆಗಳಿಗೆ ಉತ್ತರಿಸಿ. [ಗಣಿಗಾರಿಕೆ ಸ್ಫೋಟ : ಕ್ಷಣಕ್ಷಣದ ಸುದ್ದಿ]
* ಸುಮಾರು 8000 ಪುಟಗಳ ವರದಿಯಲ್ಲಿ ಕೆಲ ಭಾಗ ಮಾತ್ರ ಸೋರಿಕೆಯಾಗಿದ್ದಾರರು ಹೇಗೆ?
* ಫೋನ್, ಮೊಬೈಲ್ ಟ್ಯಾಪ್ ಬಗ್ಗೆ 2-3 ತಿಂಗಳಿನಿಂದ ಅನುಮಾನವಿತ್ತು ಎನ್ನುವುದಾದರೆ ಏಕೆ ಪೊಲೀಸರಿಗೆ ದೂರು ನೀಡಿಲ್ಲ?
* ಧನಂಜಯ್ ಕುಮಾರ್, ವಿಎಸ್ ಆಚಾರ್ಯ ಭೇಟಿಯನ್ನು ಏಳೆಂಟು ತಿಂಗಳ ನಂತರ ಹೇಳುವ ಅಗತ್ಯ ಏನಿತ್ತು?
* ವರದಿ ಸೋರಿಕೆಗೆ ಲೋಕಾಯುಕ್ತ ಕಚೇರಿ ಸಿಬ್ಬಂದಿ ಕಾರಣವಲ್ಲ ಎನ್ನುವುದಾದರೆ, ಸರ್ಕಾರವೇ ಲೀಕ್ ಮಾಡಲು ಮುಂದಾಗಿತ್ತೇ?
* ವರದಿ ಸೋರಿಕೆ ಬಗ್ಗೆ ಸಿಬಿಐ ತನಿಖೆ ನಡೆಸಲು ನಿಮ್ಮ ಒಪ್ಪಿಗೆ ಇದೆಯೇ?
* ನಿಮ್ಮ ವರದಿ ಇಷ್ಟು ತಡವಾಗಿ ಸಲ್ಲಿಸುತ್ತಿರುವ ಉದ್ದೇಶ ಅಥವಾ ಕಾರಣವೇನು?
* ಬಿಜೆಪಿ ಹೈಕಮಾಂಡ್ ಬಗ್ಗೆ ಈ ವರದಿಯಲ್ಲಿ ಏನಿದೆ? ಅಡ್ವಾಣಿ ಪ್ರಭಾವ ಬೀರಿದ್ದಾರೆಯೇ?
* ಜನ ಲೋಕಪಾಲ್ ವಿಧೇಯಕದ ಆಯೋಗಕ್ಕೆ ನಿಮ್ಮ ಸೇರ್ಪಡೆಯಿಂದ ಕೇಂದ್ರ ನಿಮ್ಮ ಮೇಲೆ ಒತ್ತಡ ಹೇರುತ್ತಿದೆಯೇ?
ಓದುಗರೇ, ನಿಮ್ಮ ಮನಸ್ಸಿನಲ್ಲೂ ಪ್ರಶ್ನೆಗಳ ಅಲೆಗಳು ಏಳುತ್ತಿದ್ದಾರೆ. ನಮಗೆ ಕಳಿಸಿ











Click it and Unblock the Notifications