ಲೋಕಾಯುಕ್ತರ 'ಸೋರಿಕೆಯ ವರದಿ' ಅಂಗೀಕರಿಸುವುದಿಲ್ಲ
ಬೆಂಗಳೂರು,
ಜುಲೈ21: ಅಕ್ರಮ ಗಣಿ ವರದಿ ಸೋರಿಕೆಯಾಗಿದ್ದು ನಿಜ ಎಂದು ಸ್ವತಃ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರೇ ಒಪ್ಪಿಕೊಂಡಿದ್ದಾರೆ. ಅದ್ದರಿಂದ ವರದಿಯ ಪಾವಿತ್ರ್ಯತೆ ಗಣಿ ಧೂಳಿನಲ್ಲಿ ಮಣ್ಣುಪಾಲು ಆಗಿದೆ. ವರದಿ ಈಗ ನಂಬಿಕೆಗೆ ಅರ್ಹವಲ್ಲ. ಆದ್ದರಿಂದ ವರದಿಯನ್ನು ಅಂಗೀಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಧನಂಜಯ್ ಕುಮಾರ್ ಘೋಷಿಸಿದ್ದಾರೆ. id="toptextpromo">ಆದರೆ,
ಇದು ಸರಕಾರದ ವತಿಯಿಂದ ಅಧಿಕೃತ ಪ್ರಕಟಣೆಯೋ ಅಥವಾ ಧನಂಜಯ್ ಅವರ ವೈಯಕ್ತಿಕ ಅಭಿಪ್ರಾಯವೋ ತಿಳಿಯದಾಗಿದೆ. ಆದಾಗ್ಯೂ, ಅಕ್ರಮ ಗಣಿ ವರದಿ ಸಿದ್ಧಪಡಿಸುವ ಹಂತದಲ್ಲಿ ಲೋಕಾಯುಕ್ತ ನ್ಯಾ. ಹೆಗ್ಡೆ ಅವರನ್ನು ಧನಂಜಯ್ ಕುಮಾರ್ ಖುದ್ದಾಗಿ ಭೇಟಿಯಾಗಿದ್ದನ್ನು ಗಣನೆಗೆ ತೆಗೆದುಕೊಂಡರೆ ಶುಕ್ರವಾರ ಸರಕಾರಕ್ಕೆ ಸಲ್ಲಿಸುವ ವರದಿ ಶೈತ್ಯಾಗಾರ ಸೇರುವ ಬಹುತೇಕ ಸಾಧ್ಯತೆಗಳಿವೆ. id='are-slot-1' class='oiad oi-axt oiadv'> id='top-searched-articles'>ನ್ಯಾ.
ಹೆಗ್ಡೆ ಅವರು ಸಲ್ಲಿಸುವ ವರದಿಯಿಂದ ಸರಕಾರಕ್ಕೇನೂ ಅಪಾಯವಿಲ್ಲ ಎಂದೂ ಧನಂಜಯ ಕುಮಾರ್ ಹೇಳಿದ್ದಾರೆ.











Click it and Unblock the Notifications