ಗಣಿ ವರದಿಯಲ್ಲಿ ಶಿಡ್ಲಘಟ್ಟ ಮುನಿಯಪ್ಪ ಹೆಸರೂ ದಾಖಲು

ಅಕ್ರಮ ಗಣಿಗಾರಿಕೆಯ ಜೊತೆ ರಾಜ್ಯದ ವಿವಿಧ ದರ್ಜೆಯ 600ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿರುವುದನ್ನು ಲೋಕಾಯುಕ್ತ ತನಿಖಾ ತಂಡ ಪತ್ತೆಹಚ್ಚಿದೆ. ಈ ಪೈಕಿ 10ಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು. ಅಚ್ಚರಿಯ ಸಂಗತಿ ಎಂದರೆ ಲೋಕಾಯುಕ್ತರು ನೀಡಿರುವ ಆರೋಪಿ ಅಧಿಕಾರಿಗಳ ಪಟ್ಟಿಯಲ್ಲಿ ಕೆಲ ಲೋಕಾಯುಕ್ತ ಪೊಲೀಸರ ಹೆಸರುಗಳೂ ಇವೆ.
ಬಳ್ಳಾರಿ ಲೋಕಾಯುಕ್ತ ಎಸ್ಪಿ ಅಶೋಕ್ ಸದಲಗಿ, ರಾಯಚೂರು ಲೋಕಾಯುಕ್ತ ಎಸ್ಪಿ ಬಿ.ಮಹಾಂತೇಶ್ ಸೇರಿದಂತೆ ಬೆಳಗಾವಿ ಮತ್ತಿತರ ಜಿಲ್ಲೆಗಳ ಹತ್ತಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ಗಣಿ ಉದ್ಯಮಿಗಳಿಂದ ಲಂಚ ಪಡೆಯುತ್ತಿದ್ದರು ಎಂಬುದು ವರದಿಯಲ್ಲಿದೆ.












Click it and Unblock the Notifications