ಸಿಟಿ ಬಸ್ ಸರ್ವೀಸ್ ನಿಂದ ಹೊಟ್ಟೆಗೆ ತಣ್ಣೀರು ಬಟ್ಟೆ: ಆಟೋ ಡ್ರೈವರ್ಸ್

ಜಿಲ್ಲಾಡಳಿತ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಸಿದ್ದಾರೆ. ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರದೊಂದಿಗೆ ಆಟೊ ಚಾಲಕರು ಮತ್ತು ಮಾಲಕರು ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ.
ಏಕೆ ಈ ಧರಣಿ?: ನಗರದೊಳಗೆ ಅರ್ಧ ಕಿ.ಮೀ. ದೂರದಲ್ಲಿರುವ ಬಡಾವಣೆಗಳಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ನಾಗರಿಕರಿಗೆ ಅನುಕೂಲವಾಗುತ್ತಿದೆ. ಆದರೆ ಆಟೊ ಚಾಲಕರು ನಷ್ಟಕ್ಕೆ ಸಿಲುಕಿದ್ದಾರೆ. ಹಾಸನ ಬಸ್ ಸ್ಟ್ಯಾಂಡ್ ನಿಂದ ತಣ್ಣೀರು ಹಳ್ಳ ಕ್ರಾಸ್ ಗೆ ದಿನ ಆಟ ಓಡಿಸಿ ಜೀವನ ಸಾಗಿಸುತ್ತಿದ್ದ ಅಬ್ದುಲ್ಲಾ, ಈಗ ತಲೆ ಮೇಲೆ ಕೈ ಹೊತ್ತಿಕೊಂಡು ಕೂತಿದ್ದಾನೆ. ಇದೇ ಅನೇಕ ಚಾಲಕರು ದೈನಂದಿನ ಜೀವನ ಸಾಗಿಸಲು ಹೆಣಗುತ್ತಿದ್ದಾರೆ.
ಆಟೋರಿಕ್ಷಾ ಚಾಲಕರ ಮನವಿ ಸ್ವೀಕರಿಸಿರುವ ಜಿಲ್ಲಾಧಿಕಾರಿ ಜಗದೀಶ್, 15 ದಿನಗಳ ಕಾಲಾವಕಾಶ ಕೋರಿದ್ದೇವೆ. ಈಗಲೇ ಹೊಟ್ಟೆಗೆ ಹಿಟ್ಟಿ ಇಲ್ಲದೆ ಉಪವಾಸ ಇದ್ದೀವಿ. ಸಭೆ ಕರೆದು ಸಮಸ್ಯೆ ಕೂಡಲೇ ಪರಿಹರಿಸಿ, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಆಟೋ ಚಾಲಕರ ಸಂಘ ಎಚ್ಚರಿಸಿದೆ.












Click it and Unblock the Notifications