ಬಾಂಬ್ ಸ್ಫೋಟ ಮುಂದೈತೆ ಮಾರಿ ಹಬ್ಬ :ನರೇಂದ್ರ ಮೋದಿ

ವಾಣಿಜ್ಯ ನಗರಿ ಮುಂಬೈ ಮೇಲೆ ದಾಳಿ ಮಾಡುವ ಭಾರತಕ್ಕೆ ತೀವ್ರ ಆರ್ಥಿಕ ಹಿನ್ನೆಡೆ ಉಂಟು ಮಾಡಲು ಉಗ್ರರು ಯೋಜಿಸಿದ್ದಾರೆ. ದಾದರ್, ಝವೇರಿ ಬಜಾರ್ ಹಾಗೂ ಒಪೇರಾ ಹೌಸ್ ನಂಥ ಜನನಿಬಿಡ ಪ್ರದೇಶಗಳನ್ನು ಆಯ್ದುಕೊಂಡು ಜನರಲ್ಲಿ ಆತಂಕ ಉಂಟು ಮಾಡಲು ಯೋಜಿತ ಉಗ್ರರ ಗುಂಪು ಯತ್ನಿಸುತ್ತಿದೆ. ಆದರೆ, ಯಾವುದೆ ಪ್ರಬಲ ಬಾಂಬ್ ಸ್ಫೋಟಕ್ಕೆ ಅಂಜದೆ, ಅಳುಕದೆ ದಿಟ್ಟವಾಗಿ ಎಲ್ಲವನ್ನು ಎದುರಿಸುವ ಛಾತಿ ಮುಂಬೈ ಜನರಿಗೆ ಇದೆ.
ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011| ವಿಡಿಯೋಗಳು: ಉಗ್ರರ ಕೈವಾಡ| ಸಾವು ನೋವು | ಯಾರು ಹೊಣೆ|
ಜುಲೈ 13ರಂದು ನಡೆದ ಸರಣಿ ಸ್ಫೋಟ ತೀರಾ "ಸಣ್ಣ ಕಾರ್ಯಾಚರಣೆ", ಉಗ್ರರ ಟಾರ್ಗೆಟ್ ಇನ್ನೂ ದೊಡ್ಡದಿದೆ. ಉಗ್ರರ ಸುಳಿವು ಸಿಕ್ಕಿಲ್ಲ ಎನ್ನುವ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸರ್ಕಾರ ಇರುವವರೆಗೂ ಭಯೋತ್ಪಾದನೆ ಚಟುವಟಿಕೆಗಳಿಗೆ ರಹದಾರಿ ನೀಡಿದಂತೆ ಎಂದು ಮೋದಿ ತಮ್ಮ ವ್ಯಥೆಯನ್ನು ತೋಡಿಕೊಂಡಿದ್ದಾರೆ.












Click it and Unblock the Notifications