ರಾಸಲೀಲೆ: ಸನ್ ಟಿವಿ ಮೇಲೆ ಬಿತ್ತು ಮತ್ತೊಂದು ಕೇಸು

ನಿತ್ಯಾನಂದ ಅವರ ಜೊತೆಗೆ ತಾನಿರುವಂತೆ ಚಿತ್ರಗಳನ್ನು ತಿರುಚಲಾಗಿದೆ. ಅಲ್ಲದೇ ವಿಡಿಯೋ ಪ್ರಸಾರವನ್ನು ಸ್ಥಗಿತಗೊಳಿಸಬೇಕಾದರೆ ಹಣ ನೀಡುವಂತೆ ವ್ಯಕ್ತಿಯೋರ್ವ ಕೇಳಿದ್ದ ಎಂದು ಆಕೆ ದೂರು ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ಜೆ.ಕೆ.ತ್ರಿಪಾಠಿ ಹೇಳಿದ್ದಾರೆ.
ರಂಜಿತಾ ನೀಡಿದ ದೂರನ್ನು ತನಿಖೆಗಾಗಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಳೆದ ವಾರವಷ್ಟೇ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮ ಪೊಲೀಸರಿಗೆ ದೂರು ನೀಡಿದ್ದು, ಸನ್ ನೆಟ್ವರ್ಕ್ ಮಾಲಿಕ ಕಲಾನಿಧಿ ಮಾರನ್ ಮತ್ತು ಕಾರ್ಯನಿರ್ವಾಹಕ ಹನ್ಸರಾಜ್ ಸಕ್ಸೇನಾ ತಿರುಚಲಾದ ವೀಡಿಯೋ ತೋರಿಸಿ ತಾವು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಪ್ರದರ್ಶಿಸಿದ್ದರು ಎಂದು ದೂರಿದ್ದರು. [ಗ್ಯಾಲರಿ : ರಂಜಿತಾ ಪತ್ರಿಕಾಗೋಷ್ಠಿ]












Click it and Unblock the Notifications