ಪದ್ಮನಾಭನಿಗೆ 'ಓಣ ವಿಲ್ಲು' ತಯಾರಿ- ಅರ್ಪಣೆಯ ಕಥಾಸಾರ

ವಿಲ್ಲು ಎಂದರೆ ಬಿಲ್ಲು ಎಂದರ್ಥ. ಬಿಲ್ಲಿನಾಕಾರದ ಹಲಗೆಗಳಲ್ಲಿ ಭಿತ್ತಿ ಚಿತ್ರಗಳನ್ನು ರಚಿಸುವುದರಿಂದ ಅದಕ್ಕೆ ಓಣ ವಿಲ್ಲು ಎಂದು ಹೆಸರು ಬಂದಿದೆ. ಅಂತೆಯೇ ಇದು ದೋಣಿಯನ್ನೂ ಸಂಕೇತಿಸುತ್ತದೆ. ತಿರುವಾಂಕೂರು ಸಂಸ್ಥಾನವನ್ನು ಹಿಂದೆ ವಂಚಿನಾಡು ಎಂದು ಕರೆಯಲಾಗುತ್ತಿತ್ತು. ಮಲಯಾಳಂ ಭಾಷೆಯಲ್ಲಿ ವಂಚಿ ಎಂದರೆ ದೋಣಿ ಎಂದರ್ಥ.
ಓಣಂ ವಿಷ್ಣುವಿನ ದಶಾವತಾರಕ್ಕೆ ಸಂಬಂಧಿಸಿರುವ ಹಬ್ಬವಾಗಿರುವುದರಿಂದ ಬಹುತೇಕ ಓಣ ವಿಲ್ಲುಗಳು ದಶಾವತಾರದ ಕತೆಗಳನ್ನು ಒಳಗೊಂಡಿರುತ್ತವೆ. ತಿರು ಓಣಂ ದಿನ ಅನಂತ ಪದ್ಮನಾಭ ದೇವರಿಗೆ ಓಣ ವಿಲ್ಲು ಅರ್ಪಿಸುವ ಕ್ರಮ ಶತಮಾನಗಳಿಂದ ನಡೆದು ಬಂದಿದೆ. ಮರದ ಹಲಗೆಗಳಲ್ಲಿ ವಿಷ್ಣು ಕಥಾವಳಿಯನ್ನು ಆಕರ್ಷವಾಗಿ ಚಿತ್ರಿಸುವ ಒಂದು ಕುಟುಂಬವೇ ಇಲ್ಲಿದೆ. ವಣಿಯಮ್ಮೂಲ ವಿಲಯಿಲ್ ಪರಿವಾರದವರು ಸುಮಾರು ಮೂರು ಶತಮಾನಗಳಿಂದ ಓಣ ವಿಲ್ಲು ತಯಾರಿಸುತ್ತಿದ್ದಾರೆ. ಇವರ ಮೂಲ ತಮಿಳುನಾಡಿನ ಕಂಚೀಪುರ.
ಈಗಿರುವ ಭವ್ಯ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಪುನರ್ ನಿರ್ಮಿಸಿರುವ ತಿರುವಾಂಕೂರು ಮಹಾರಾಜ ಮಾರ್ತಾಂಡ ವರ್ಮ ಈ ಕಲಾಕಾರರ ಪರಿವಾರವನ್ನು ಇಲ್ಲಿಗೆ ಕರೆ ತಂದು ನೆಲೆಗೊಳಿಸಿದ್ದಾರೆ. ದೇಗುಲದ ನಿರ್ಮಾಣ ಕಾರ್ಯ ಮುಗಿದ ನಂತರ ದೊರೆಯೇ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಈ ಪರಿವಾರದವರಿಗೆ ರಾಜಧಾನಿಯಲ್ಲಿ ಉಳಿಯುವ ವ್ಯವಸ್ಥೆ ಮಾಡಿ ಓಣ ವಿಲ್ಲು ತಯಾರಿಸುವ ಜವಾಬ್ದಾರಿ ವಹಿಸಿದರು.
ತಿರು ಓಣಂ ದಿನ ಮೊದಲ 12 ಓಣ ವಿಲ್ಲುಗಳನ್ನು ಕಲಾವಿದರೇ ದೇವರಿಗೆ ಸಮರ್ಪಿಸುತ್ತಾರೆ. ಅನಂತರ ತಿರುವಾಂಕೂರು ಅರಮನೆಯಲ್ಲಿ ಓಣ ವಿಲ್ಲು ಸಮರ್ಪಿಸುವ ಸಮಾರಂಭ ಪ್ರಾರಂಭವಾಗುತ್ತದೆ. ಉಳಿದ ಓಣ ವಿಲ್ಲುಗಳನ್ನು ಅವುಗಳನ್ನು ಕಾದಿರಿಸಿದ ಭಕ್ತರು ದೇವಸ್ಥಾನದಲ್ಲಿ ಸಮರ್ಪಿಸುತ್ತಾರೆ. ಸಾಧಾರಣವಾಗಿ 4.5 ಅಡಿ ಉದ್ದದ ತೆಳು ಮರದ ಹಲಗೆಗಳನ್ನು ಓಣ ವಿಲ್ಲು ತಯಾರಿಸಲು ಬಳಸುತ್ತಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications