Get Updates
Get notified of breaking news, exclusive insights, and must-see stories!

ಕಟ್ಟಾಗೆ 87 ಕೋಟಿ ರು. ಲಂಚ: ಲೋಕಾಯುಕ್ತ ಆರೋಪ

Katta
ಬೆಂಗಳೂರು, ಜು.9: ಅದೇನು ಗ್ರಹಚಾರವೋ ಏನೋ! ಭೂ ಕಬಳಿಕೆ ಅಥವಾ ಲಂಚ ಪಡೆದ ಪ್ರಕರಣಗಳು ದಿನನಿತ್ಯದ ವರದಿಗಳಾಗುತ್ತಿವೆ. ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಶಾಸಕರುಗಳನ್ನು ಸಂಶಯದಿಂದಲೇ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗತೊಡಗಿದೆ. ಇದೀಗ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಪುತ್ರ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿ 9 ಜನರ ವಿರುದ್ಧ ಲೋಕಾಯುಕ್ತರಿಂದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿದೆ.

'ಇಟಾಸ್ಕಾ ಸಾಪ್ಟ್ ವೇರ್ ಡೆವಲಪ್ ಮೇಂಟ್ ಕಂಪನಿ'ಗೆ ಕೆಐಎಡಿಬಿ ಮೂಲಕ ಅಕ್ರಮವಾಗಿ 325 ಎಕರೆ ಭೂಮಿ ಮಂಜೂರು ಮಾಡಿರುವುದಕ್ಕೆ ಪ್ರತಿಯಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡ ಹಾಗೂ ಕಟ್ಟಾ ಜಗದೀಶ್ ಅವರು 87 ಕೋಟಿ ರು. ಲಂಚ ಪಡೆದಿರುವುದು. ಈ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಮಾಜಿ ಸಚಿವರೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದ ಕಟಕಟೆಗೆ ಬಂದು ನಿಂತಂತಾಗಿದೆ.

ಆರೋಪಪಟ್ಟಿಯನ್ನು ಸ್ವೀಕರಿಸಿರುವ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ಅವರು 19 ರಿಂದ ವಿಚಾರಣೆ ಪ್ರಾರಂಭ ಎಂದು ಹೇಳಿ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡಿ, ಜುಲೈ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಈಗಾಗಲೇ ಭ್ರಷ್ಟಾಚಾರದಲ್ಲಿ ನಂ.1 ಪಟ್ಟ ಗಿಟ್ಟಿಸಿರುವ ರಾಜ್ಯದಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ ಭ್ರಷ್ಟಾಚಾರ. ಜನಸಾಮಾನ್ಯರು ಇದರ ಕರಿನೆರಳಿನಲ್ಲೆ ಬದುಕಬೇಕಾದ ದುಸ್ಥಿತಿಗೆ ಏನನ್ನಬೇಕು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+