ಅರಮನೆ ಮೈದಾನದಲ್ಲಿ ಸದ್ಗುರು ಪ್ರವಚನ ಮಾಲಿಕೆ

Sadhguru
ಬೆಂಗಳೂರು, ಜು. 7 : ನೆಮ್ಮದಿ ಮತ್ತು ಸಂತೋಷ ದಟ್ಟ ಕಾನನದ ನಡುವಿನ ಮರಗಿಡಗಳ ಹಸುರೆಲೆಗಳ ನೆರಳಿನಡಿಯ ನಿಶ್ಯಬ್ದ ಪರಿಸರದಲ್ಲಿ ಸಿಗದು, ಅಥವಾ ಸಾಮಾಜಿಕ ಅರಣ್ಯದಲ್ಲಿ ಕಾಣುವ ಯಶಸ್ಸುಗಳಿಂದ ಸಿಗುವಂಥದೂ ಅಲ್ಲ. ಅದು ನಿನ್ನೊಳಗೇ ಸಿಗುವ ನಿನಗೇ ಮೀಸಲಾದ, ನಿನಗೆ ದಕ್ಕುವ ನೀನು.

ಹಾಗೆ ಹೇಳುವ ಗುರುವೇ ಸದ್ಗುರು. ಕೊಯಮತ್ತೂರು ಮೂಲದ ಇಶಾ ಫೊಂಡೇಶನ್ನಿನ ಸ್ಥಾಪಕ ಮತ್ತು ಪ್ರೇರಕ ಶಕ್ತಿ ಸದ್ಗುರುವಿನ ಪ್ರವಚನ ಬುಧವಾರ ಸಂಜೆ ಬೆಂಗಳೂರಿನಲ್ಲಿ ಇತ್ತು. ಅರಮನೆ ಮೈದಾನದಲ್ಲಿ ಎರಡು ಗಂಟೆಗಳ ಕಾಲ ನಡೆದ ಅವರ ನಿರರ್ಗಳ , ಚೇತೋಹಾರಿ ಪ್ರವಚನ, ಪಶ್ನೋತ್ತರದ ಜೀವಾಳಕ್ಕೆ ಅವರೇ ಕೊಡುವ ಹೆಸರು The inner way or the inner engineering.

ಸದ್ಗುರು ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ತಂಗುತ್ತಾರೆ. ಜುಲೈ 8-10 ರವರೆಗೆ ಮೂರು ದಿನಗಳ ಶಿಬಿರ ಇದೆ. ಸ್ಥಳ ತ್ರಿಪುರ ವಾಸಿನಿ, ಅರಮನೆ ಮೈದಾನ, ವಿಮಾನ ನಿಲ್ದಾಣದ ರಸ್ತೆ, ಮೇಕ್ರಿ ವೃತ್ತದ ಸಮೀಪ.

ಆಸಕ್ತರು ಭಾಗವಹಿಸಬಹುದು. ಆಧ್ಯಾತ್ಮ, ಲೌಕಿಕಗಳ ನಡುವೆ ಸ್ಯಾಂಡ್ವಿಚ್ ಆಗಿರುವರಿಗೆ ಈ ಶಿಬಿರ ಒಂದಿಷ್ಟು ಉತ್ತರಗಳನ್ನು ಒದಗಿಸಬಹುದು. ಪ್ರಯತ್ನಿಸಿ. ಉಚಿತ ನೊಂದಾವಣೆ ಮತ್ತು ಕಾರ್ಯಕ್ರಮಗಳ ವಿವರಗಳಿಗಾಗಿ ಸಂಪರ್ಕ ಮಾಹಿತಿ ಹೀಗಿದೆ.

94808 36600, 94808 36601, 94808 36602 ಅಥವಾ ಒಂದು ಇಮೇಲ್ : [email protected].

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+