ರಾಜಾನುಕುಂಟೆ ಶಾಲೆಯಲ್ಲಿ ಯಡಿಯೂರಪ್ಪ ಏನು ಕಲಿತರು?

ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ಸರಕಾರಿ ಶಾಲೆಗೆ ಹೋಗಿ ಮಕ್ಕಳೊಡನೆ ಮಕ್ಕಳಾಗಿ, ಮೇಷ್ಟ್ರುಗಳೊಡನೆ ಮೇಷ್ಟ್ರಾಗಿ ಕನ್ನಡ ಶಾಲೆಗಳು ಹೇಗಿರುತ್ತವೆ ಎಂಬ ಬಗ್ಗೆ ಸ್ವತಃ ಮಾಹಿತಿ ಪಡೆದು ಬಂದರು. ಮಕ್ಕಳೆಲ್ಲ ವಿವಿಧ ವೇಷ ತೊಟ್ಟು ರಂಜಿಸಿದರು, ಹಾಡಿದರು, ಕುಣಿದರು ನಲಿದಾಡಿದರು.
ಯಡಿಯೂರಪ್ಪನವರು ಕೂಡ ಮಕ್ಕಳೊಡನೆ ಬೆಂಚ್ ಮೇಲೆ ಕುಳಿತು ಪುಸ್ತಕ ಕೈಯಲ್ಲಿ ಹಿಡಿದರು, ಬಾಳೆ ಎಲೆಯ ಮೇಲೆ ಶಿಕ್ಷಣ ಸಚಿವ ವಿಶ್ವನಾಥ್ ಹೆಗಡೆ ಕಾಗೇರಿ ಮತ್ತು ಮಕ್ಕಳೊಡನೆ ಕುಳಿತು ಊಟ ಆಸ್ವಾದಿಸಿದರು, ಸೈಕಲ್ ಕೊಟ್ಟರು, ಕೆಲ ಕಿವಿಮಾತುಗಳನ್ನೂ ಹೇಳಿದರು. ಈ ಅನುಭವದಿಂದ ಯಡಿಯೂರಪ್ಪ ಕಲಿತದ್ದಾದರೂ ಏನು?
ಯಡಿಯೂರಪ್ಪನವರಿಗೆ ಕೆಲ ಸೂಚನೆಗಳು
* ಮುಂದಿನ ಬಾರಿ ಶಾಲೆಗೆ ಭೇಟಿ ನೀಡುವಾಗ ಕಾರವಾರ ಜಿಲ್ಲೆಯ ಸನಮುದಗೇರಿ ಸರಕಾರಿ ಶಾಲೆಗೆ ಭೇಟಿ ನೀಡಲಿ. ಏಕೆಂದರೆ, ಅಲ್ಲಿರುವುದು ಒಬ್ಬೇ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬೇ ಒಬ್ಬ ಶಿಕ್ಷಕ. ಆ ಶಾಲೆಯನ್ನು ಮುಚ್ಚುತ್ತಾರಾ, ಇಟ್ಟುಕೊಳ್ಳುತ್ತಾರಾ ಯಡಿಯೂರಪ್ಪ ಉತ್ತರ ನೀಡಲಿ.
* ಸರಕಾರಿ ಶಾಲೆಗಳಲ್ಲಿ ವರ್ಷದೊಳಗೆ ಶೌಚಾಲಯ ಕಟ್ಟಿಸುತ್ತೇನೆಂದು ಹೇಳಿದ್ದಾರೆ. ಅಲ್ಲಿಯವರೆಗೆ ಬಡ ಮಕ್ಕಳು ಏನು, ಎಲ್ಲಿ ಮಾಡಬೇಕು? ಇದಕ್ಕೆ ಒಂದು ಡೆಡ್ ಲೈನ್ ಹಾಕಿಕೊಳ್ಳಲಿ. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಬಯಲೇ ಗತಿ.
* ಗಡಿಯಲ್ಲಿರುವ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಅವು ಮುಚ್ಚುವ ಹಂತಕ್ಕೆ ಬಂದಿದ್ದಕ್ಕೆ ಕಾರಣಗಳೇನೆಂದು ತಿಳಿಯಲು ಯಡಿಯೂರಪ್ಪನವರು ಪ್ರಯತ್ನಪಡಲಿ. ಶಾಲೆ ಇಟ್ಟುಕೊಳ್ಳುವುದಷ್ಟೇ ಅಲ್ಲ, ಅಲ್ಲಿ ವಿದ್ಯಾರ್ಥಿಗಳೂ ಬರುವಂತೆ ಕಾರ್ಯಕ್ರಮ ಹಾಕಿಕೊಳ್ಳಲಿ.
* ಸರಿಯಾದ ಪಠ್ಯಪುಸ್ತಕಗಳಿಲ್ಲದೆ, ಪಾಟಿಚೀಲವಿಲ್ಲದೆ, ಟೈಬೂಟು ಇಲ್ಲದೆ ಹರಕು ಮುರುಕು ಸಮವಸ್ತ್ರಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಎಲ್ಲಾ ವಸ್ತುಗಳು ದೊರಕಿಸಿಕೊಡಲು ಯಡಿಯೂರಪ್ಪನವರು ಏನು ಯೋಜನೆ ಹಾಕಿಕೊಂಡಿದ್ದಾರೆ?
* ಖಾಸಗಿ ಶಾಲೆಗಳಲ್ಲಿ ಇರುವಂತೆ ಉತ್ತಮ ಗುಣಮಟ್ಟದ ಗ್ರಂಥಾಲಯ, ಶೌಚಾಲಯ, ತರಗತಿ ಕೊಠಡಿ, ಪ್ರಯೋಗಾಲಯ, ಆಟದ ಸೌಕರ್ಯಗಳು ಸರಕಾರಿ ಶಾಲಾ ಮಕ್ಕಳಿಗೂ ದೊರೆಯುವಂತಾಗಲಿ. [ಗ್ಯಾಲರಿ : ಸರಕಾರಿ ಶಾಲಾ ಮಕ್ಕಳೊಂದಿಗೆ ಯಡಿಯೂರಪ್ಪ]
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications