ಮಂಗಳೂರು ಕೆಸರುಗದ್ದೆ ನೃತ್ಯ ಸ್ಪರ್ಧೆ ನಿಮಗೆ ಗೊತ್ತಾ?

ಟಿವಿ, ಮೊಬೈಲ್, ಕಂಪ್ಯೂಟರ್ ದಾಳಿಯಿಂದಾಗಿ ಬಹುಬೇಗ ಇಲ್ಲಿನ ಸಂಸ್ಕೃತಿ ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಲೀನವಾಗುತ್ತಿದೆ. ಈ ಕಾರಣದಿಂದಲೇ ಯುವಪೀಳಿಗೆಯನ್ನು ಮತ್ತೆ ಗತಕಾಲದ ಮೂಲ ಸಂಸ್ಕೃತಿ ಪರಿಚಯಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇಂಥವುಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಕೆಸರುಗದ್ದೆ ಓಟ, ಆಟೋಟಗಳು ಕರಾವಳಿಯ ಅನೇಕ ಕಡೆಗಳಲ್ಲಿ ಜನಪ್ರಿಯವಾಗುತ್ತಿವೆ.
ಇತ್ತೀಚೆಗೆ ಮಂಗಳೂರು ಹೊರವಲಯದ ಪಾವಂಜೆಯಲ್ಲಿ ಎರಡು ದಿನಗಳ ಕಾಲ ಕೆಸರುಗದ್ದೆ ಕ್ರೀಡೋತ್ಸವ ಆಯೋಜಿಸಲಾಗಿತ್ತು. ಈ ಪೈಕಿ ಕುತೂಹಲ ಕೆರಳಿಸಿದ ಅಂಶವೆಂದರೆ ಕೆಸರುಗದ್ದೆ ನೃತ್ಯ ಸ್ಪರ್ಧೆ. ಸಾಮಾನ್ಯವಾಗಿ ವೇದಿಕೆಗಳಲ್ಲಿ, ಬಯಲು ಮಂಟಪದಲ್ಲಿ ನೃತ್ಯ ಪ್ರದರ್ಶನ, ಸ್ಪರ್ಧೆಗಳು ನಡೆಯುವುದುಂಟು. ಆದರೆ ಇಲ್ಲಿ ಕೆಸರುಗದ್ದೆಯಲ್ಲಿ ಸ್ಪರ್ಧಿಗಳು ನರ್ತಿಸಬೇಕು. ನಿಜಕ್ಕೂ ಇದು ನೃತ್ಯಗಾರ್ತಿಯರಿಗೂ ಥ್ರಿಲ್ಲಿಂಗ್.
ಜನಪದ ಉಡುಗೆತೊಟ್ಟು, ಹಾಡಿಗೆ ಕೆಸರಿನಲ್ಲಿ ಹೆಜ್ಜೆ ಹಾಕುವುದು ಅಷ್ಟು ಸುಲಭವಂತೂ ಅಲ್ಲ. ಇಂಥ ಪ್ರಯತ್ನ ಪಾವಂಜೆಯಲ್ಲಿ ಸಾಕಾರಗೊಂಡು ನೋಡುಗರನ್ನು ಮುದಗೊಳಿಸಿತ್ತು ಕೆಸರುಗದ್ದೆ ನೃತ್ಯ ಸ್ಪರ್ಧೆ.
ಗದ್ದೆಯ ಕೆಸರು ಹೇಗಿರುತ್ತದೆ ಎನ್ನುವುದೇ ಪಟ್ಟಣಗಳ ಮಕ್ಕಳಿಗೆ ಗೊತ್ತಿರದ ಸನ್ನಿವೇಶ ಈಗಿನದು. ಅಂಥದ್ದರಲ್ಲಿ ಭತ್ತ ಬೆಳೆಯುವ ಗದ್ದೆ, ಅದೂ ಕೆಸರಲ್ಲಿ ಕುಣಿಯುವುದೆಂದರೆ ಒಂಥರಾ ಕುಷಿ, ಇದನ್ನು ಮಕ್ಕಳು ನಿಜಕ್ಕೂ ಎಂಜಾಯ್ ಮಾಡಿದರು. ಈ ಕೆಸರುಗದ್ದೆ ನೃತ್ಯ ಸ್ಪರ್ಧೆಯಲ್ಲಿ ಸುರತ್ಕಲ್ ಕಲಾಕುಂಭ ಸಾಂಸ್ಕ್ರತಿಕ ತಂಡ ಪ್ರಥಮ ಬಹುಮಾನ ಪಡೆದು ಕೆಸರುಗದ್ದೆಯಲ್ಲೂ ನೃತ್ಯ ಮಾಡಿ ಗೆಲ್ಲಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications