10 ಸಾವಿರ ಕೋಟಿ ಒಡೆಯ ಯಡ್ಡಿಗೆ ಸಿದ್ದು ಬಹುಪರಾಕ್!

ಗದಗ್ ನಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡುತ್ತಾ, "ಆಸ್ತಿ ಇಲ್ಲದೆ ಬೂಕನಕೆರೆಯಿಂದ ಶಿವಮೊಗ್ಗಕ್ಕೆ ಓಡಿ ಬಂದಿದ್ದ ಯಡಿಯೂರಪ್ಪ 10 ಸಾವಿರ ಕೋಟಿ ರು ಗಳಿಸಲು ತುಂಬಾ ತ್ಯಾಗ, ಶ್ರಮ, ಬಲಿದಾನಗಳನ್ನು ಮಾಡಿದ್ದಾರೆ. ರಾಜ್ಯದ ಸುಮಾರು 50 ಸಾವಿರ ಕೋಟಿ ರು ಖನಿಜ ಸಂಪತ್ತನ್ನು ಗಣಿ ಧಣಿಗಳೊಂದಿಗೆ ಸೇರಿ ಲೂಟಿ ಮಾಡಿದ್ದರೆಂದು ಸಿದ್ದು ಆರೋಪಿಸಿದರು.
ಅಪರೇಷನ್ ಕಮಲ ಮೂಲಕ ರಾಜ್ಯದಲ್ಲಿ ರಾಜಕೀಯ ವ್ಯಭಿಚಾರಕ್ಕೆ ಬಿಜೆಪಿ ನಾಂದಿ ಹಾಡಿತು. ದುಡ್ಡು ಬಾಚುವುದರಲ್ಲಿ ಯಡಿಯೂರಪ್ಪ ನಿಸ್ಸೀಮ, ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನೂ ಒಂದೇ, ಬೂಕನಕೆರೆ ಯಡಿಯೂರಪ್ಪನೂ ಒಂದೇ ಎಂದು ಸಿದ್ದು ಹಲ್ಲುಕಿರಿಯುತ್ತಾ ಯಡಿಯೂರಪ್ಪ ಅವರ ಮೇಲೆ ವಿಷಕಾರಿದರು.












Click it and Unblock the Notifications