ತ್ವರಿತ ಅಲರ್ಟ್ ಗಳಿಗಾಗಿ
For Daily Alerts
10 ಸಾವಿರ ಕೋಟಿ ಒಡೆಯ ಯಡ್ಡಿಗೆ ಸಿದ್ದು ಬಹುಪರಾಕ್!
ಗದಗ್ ನಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡುತ್ತಾ, "ಆಸ್ತಿ ಇಲ್ಲದೆ ಬೂಕನಕೆರೆಯಿಂದ ಶಿವಮೊಗ್ಗಕ್ಕೆ ಓಡಿ ಬಂದಿದ್ದ ಯಡಿಯೂರಪ್ಪ 10 ಸಾವಿರ ಕೋಟಿ ರು ಗಳಿಸಲು ತುಂಬಾ ತ್ಯಾಗ, ಶ್ರಮ, ಬಲಿದಾನಗಳನ್ನು ಮಾಡಿದ್ದಾರೆ. ರಾಜ್ಯದ ಸುಮಾರು 50 ಸಾವಿರ ಕೋಟಿ ರು ಖನಿಜ ಸಂಪತ್ತನ್ನು ಗಣಿ ಧಣಿಗಳೊಂದಿಗೆ ಸೇರಿ ಲೂಟಿ ಮಾಡಿದ್ದರೆಂದು ಸಿದ್ದು ಆರೋಪಿಸಿದರು.
ಅಪರೇಷನ್ ಕಮಲ ಮೂಲಕ ರಾಜ್ಯದಲ್ಲಿ ರಾಜಕೀಯ ವ್ಯಭಿಚಾರಕ್ಕೆ ಬಿಜೆಪಿ ನಾಂದಿ ಹಾಡಿತು. ದುಡ್ಡು ಬಾಚುವುದರಲ್ಲಿ ಯಡಿಯೂರಪ್ಪ ನಿಸ್ಸೀಮ, ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನೂ ಒಂದೇ, ಬೂಕನಕೆರೆ ಯಡಿಯೂರಪ್ಪನೂ ಒಂದೇ ಎಂದು ಸಿದ್ದು ಹಲ್ಲುಕಿರಿಯುತ್ತಾ ಯಡಿಯೂರಪ್ಪ ಅವರ ಮೇಲೆ ವಿಷಕಾರಿದರು.
Comments
English summary
Siddaramaiah Takes on Karnataka CM BS Yeddyurappa. Yeddyurappa has illegal assets worth more than Rs 10 crores. All the money he has got is through various Land scams and permitting illegal mining in Karnataka. BSY is the no 1 corrupt chief minister in India.
Story first published: Tuesday, July 5, 2011, 18:32 [IST]