ಶ್ರೀರಂಗಪಟ್ಟಣ ಬಳಿ ಕಾರು-ರೈಲು ಡಿಕ್ಕಿ: ಇಬ್ಬರ ಸಾವು

ಮಲ್ಲೇಗೌಡನಹಳ್ಳಿಯ ರಮೇಶ್ (40), ಪಾಂಡವಪುರ ತಾಲ್ಲೂಕಿನ ಸಿಂಧಬೋಗನಗ್ರಾಮದ ವೈಕುಂಠೇಗೌಡ (37) ಮೃತ ಪಟ್ಟವರು. ಮಾನವ ರಹಿತ ರೈಲ್ವೆ ಕ್ರಾಸಿಂಗ್ ಬಳಿ ರಾತ್ರಿ 9.05 ಗಂಟೆಗೆ ಈ ಅಪಘಾತ ಸಂಭವಿಸಿದೆ.
ರೈಲು ಅರಸೀಕೆರೆಯಿಂದ ಮೈಸೂರಿಗೆ ಬರುತ್ತಿತ್ತು. ಕಾರು ಮಲ್ಲೇಗೌಡನಹಳ್ಳಿಯಿಂದ ಕೆಆರ್ಎಸ್ಗೆ ಬರುತ್ತಿತ್ತು. ಡಿಕ್ಕಿಯ ರಭಸಕ್ಕೆ ಕಾರು ಎರಡು ತುಂಡಾಗಿದ್ದು ಅರ್ಧ ಕಿಲೋ ಮೀಟರ್ ದೂರದಲ್ಲಿ ಬಿದ್ದಿದ್ದು ಮೃತದೇಹಗಳು ಛಿದ್ರಗೊಂಡಿವೆ.












Click it and Unblock the Notifications