ಹುಸೇನ್ ಸಾಬಿಗೂ ಎಮ್ಮಿಕೇರಿ ಪಾಲಿಕೆಗೂ ಏನ್ ಸಂಬಂಧ?

ವಾಡಿಕೆಯಂತೆ ನಮ್ಮನ್ನು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಸಂತಾಪ ಸೂಚನೆ ವಿಧಿ ವಿಧಾನ ಜನಪ್ರತಿನಿಧಿಗಳ ಸಭೆಯಲ್ಲಿ ಕಾಮನ್. ಆದರೆ, ಬಿಜೆಪಿ ಪಕ್ಷದ ಪಾಲಿಕೆ ಸದಸ್ಯ ಶಿವಾನಂದ ಮಟ್ಟನವರ್ ಅವರು ಎಂಎಫ್ ಹುಸೇನ್ ಒಬ್ಬ ದೇಶದ್ರೋಹಿ ಅವನಿಗೆ ಯಾವುದೇ ಸಂತಾಪ ಸೂಚಿಸಬೇಕಾಗಿಲ್ಲ ಎಂದು ಮಾಸಿಕ ಸಭೆಯಲ್ಲಿ ಹೇಳಿದ್ದು ಗದ್ದಲಕ್ಕೆ ಕಾರಣವಾಯಿತು.
ಶಿವಾನಂದ್ ಅವರ ಹೇಳಿಕೆ ಖಂಡಿಸಿದ ಕಾಂಗ್ರೆಸ್ ನ ಗನೇಶ್ ತಗರ್ ಗುಂಟಿ, ಇದು ಆರೆಸ್ಸೆಸ್ ಸಭೆಯಲ್ಲ, ಹುಸೇನ್ ಗೆ ಸರಿಯಾದ ಮರ್ಯಾದೆ ಕೊಡುವುದನ್ನು ಕಲಿತುಕೊಳ್ಳಿ ಎಂದು ಹೇಳಿದರು. ಇದೆ ಸಮಯಕ್ಕೆ ಕಾಯುತ್ತಿದ್ದ ಜನಪ್ರಿತಿನಿಧಿಗಳು ಕೈಗೆ ಸಿಕ್ಕಿದ ಬಾಟಲಿ, ಪೇಪರ್ ಗಳನ್ನು ಗಾಳಿಗೆ ತೂರುತ್ತಾ ಗಲಭೆ ಎಬ್ಬಿಸಿದರು. ಹುಸೇನ್ ಹೆಸರಿನಲ್ಲಿ ಶುರುವಾದ ಕದನ ವೈಯಕ್ತಿಕ ಬೈಗುಳಕ್ಕೆ ತಿರುಗಿ, ಪರಸ್ಪರ ಕೆಸರೆರಚಾಟಕ್ಕೆ ತಿರುಗಿತು.
ಈ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಪಟ್ಟು ವಿಫಲರಾದ ಮೇಯರ್ ಪೂರ್ಣ ಪಾಟೀಲ್, ಸಭೆಯನ್ನು ಮುಂದೂಡಿದರು. ಶಿವಾನಂದ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಪಕ್ಷ ನಾಯಕ್ ದೀಪಕ್ ಚಿಂಚೋರೆ, ಜೆಡಿಎಸ್ ನ ಆಲ್ತಾಫ್ ಕಿತ್ತೂರು ಆಗ್ರಹಿಸಿದ್ದಾರೆ. ಸಭೆಯಿಂದ ಹೊರ ಬೀಳುತ್ತಿದ್ದಂತೆ ದೂರದಲ್ಲಿ ಒಂದು ಧ್ವನಿ ಲೇ ಯಾರಲೇ ಅದು ಹುಸೇನ್ ಎಂದು ಕೇಳಿದ್ದು, ಮೇಯರ್ ಕಿವಿಗೆ ಬೀಳಲಿಲ್ಲವಂತೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications