ನಕ್ಸಲರಿಂದ ಬೆಂಗಳೂರು ಸಂಶೋಧನಾ ವಿದ್ಯಾರ್ಥಿನಿ ಅಪಹರಣ

ಜೂಹಿ ತ್ಯಾಗಿ (25) ಅಪಹರಣಕ್ಕೆ ಒಳಗಾಗಿದ್ದು, ಆಕೆ ಪ್ರಯಾಣಿಸುತ್ತಿದ್ದ ವಾಹನದ ಚಾಲಕ ಪ್ರದೀಪ್ ದಾಸ್ ಎಂಬಾತನನ್ನೂ ಅಪಹರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಕ್ಸಲರು ಬುಧವಾರ ಸಂಜೆ ದಾಸ್ ಮನೆಗೆ ದೂರವಾಣಿ ಕರೆ ಮಾಡಿ ಅಪಹರಿಸಿರುವ ಮಾಹಿತಿ ನೀಡಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಜೂಹಿ, ನ್ಯೂಯಾರ್ಕ್ ಸ್ಟೋನಿ ಬ್ರೂಕ್ ಯೂನಿವರ್ಸಿಟಿ ವಿದ್ಯಾರ್ಥಿನಿ. ನಕ್ಸಲರನ್ನು ಕುರಿತು ಸಂಶೋಧನೆ ನಡೆಸುತ್ತಿದ್ದ ಜೂಹಿ, ಜಮೈನ ದಟ್ಟ ಅರಣ್ಯದ ಒಳಗೆ ಹೋಗಿದ್ದಾಗ ನಕ್ಸಲರು ಅಪಹರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಸಿಂಗ್ ತಿಳಿಸಿದ್ದಾರೆ.












Click it and Unblock the Notifications