ಬ್ರೇಕಿಂಗ್ ನ್ಯೂಸ್: ಶಿವ, ಸಂಕೇಶ್ವರ ಮಿಲನ

ಆದರೆ, ಇಂದು ನಡೆದಿರುವ ಲೇಟೆಸ್ಟ್ ಬೆಳವಣಿಗೆ ಬಗ್ಗೆ ಮೀಡಿಯಾಮನ ಬ್ಲಾಗ್ ಬರೆದು ಕೊಂಡಿದೆ. ಸತ್ಯಾಸತ್ಯತೆಯ ಸಂಪೂರ್ಣ ಹಕ್ಕು ಬ್ಲಾಗ್ ಓನರ್ ಗೆ ಸೇರುತ್ತದೆ. ಹೊಸ ಪತ್ರಿಕೆ ಮಾಡುವ ಹುಮ್ಮಸ್ಸಿನಲ್ಲಿರುವ ವಿಜಯ ಸಂಕೇಶ್ವರ ಅವರನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಹುದ್ದೆಗಾಗಿ ಚಡಪಡಿಸುತ್ತಿರುವ ಶಿವ ಸುಬ್ರಹ್ಮಣ್ಯ ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಭೇಟಿ ಮಾಡಿದ್ದಾರೆ. ಶಿವನ ಕುರಿತು ಸಂಕೇಶ್ವರ ಅವರ ಅಭಿಪ್ರಾಯ ಏನಿದೆ ಎಂಬುದನ್ನು ಮೊದಲೇ ಪ್ರಕಟಿಸಲಾಗಿದೆ.
ಸಂಕೇಶ್ವರ ಅವರ ನಿರಾಸಕ್ತಿಯ ಹೊರತಾಗಿಯೂ ಕೆಲವರನ್ನು ಕಾಡಿ ಬೇಡಿ ಅವರನ್ನು ಭೇಟಿ ಮಾಡಲು ಶಿವ ಯಶಸ್ವಿಯಾಗಿದ್ದಾರೆ. ಈಗಾಗಲೇ ಹೊಸಪತ್ರಿಕೆ ಕಾರ್ಯಾರಂಭದ ಸೂಚನೆಯಾಗಿ ತಿಮ್ಮಪ್ಪ ಭಟ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಕೈ ಕೆಳಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಶಿವ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಫಲಶ್ರುತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.
ಆದರೆ ತಿಮ್ಮಪ್ಪ ಭಟ್ ಅವರನ್ನು ಸಂಪಾದಕರನ್ನಾಗಿ ನೇಮಿಸಿಕೊಂಡಿದ್ದಾರೋ ಅಥವಾ ಸಲಹೆಗಾರ ರೀತಿ ನೇಮಿಸಿಕೊಂಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
ಉದಯವಾಣಿ ಬಳಗಕ್ಕೆ ರವಿ ಹೆಗ್ಡೆ ಬಳಗ ಹೋದ ಮೇಲೆ ತಿಮ್ಮಪ್ಪ ಭಟ್ಟರು ಅಲ್ಲಿಂದ ಹೊರಬಿದ್ದಿದ್ದರು. ಅಷ್ಟೇ ಬೇಗ ಇನ್ನೊಂದು ಸ್ಥಾನ ಗಳಿಸಲು ಅವರು ಯಶಸ್ವಿಯಾಗಿದ್ದಾರೆ. ಆದರೆ ಇನ್ನಿಬ್ಬರು ಮಾಜಿ ಸಂಪಾದಕರು ಮಾತ್ರ ಇನ್ನು ಹುದ್ದೆ ಹುಡುಕಾಟದಲ್ಲಿ ಬ್ಯೂಸಿ!
ಕೊನೆ ಕುಟುಕು: ಮಾಧ್ಯಮ ಮಿತ್ರರ ನಡುವೆ ಹರಿದಾಡುತ್ತಿರುವ ಎಸ್ ಎಂಎಸ್ ಹೀಗಿದೆ: Media news: 1. Kp Circulation jasti aagta illa. bhat ge tale novu! 2. Venkata Narayan samapadakatvadalli hosa daily 3.TV 5 ge h.r. ranganath 4. Janashri maaraTa! 5. Vijay Sankeshvara paper ge timmappa bhat editor
ಇದರಲ್ಲಿ ಜನಶ್ರೀ ಮಾರಾಟ, ತಿಮ್ಮಪ್ಪ ಭಟ್ಟರ ಸುದ್ದಿ ಸ್ಥಿರ ಎಂದರೂ ಉಷಾ ಕಿರಣ ಖ್ಯಾತಿಯ ವೆಂಕಟ ನಾರಾಯಣ್ ಸ್ಟೋರಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಶಿವ ಹಾಗೂ ಸಂಕೇಶ್ವರ ಮಿಲನವಾದರೆ ತಿಮ್ಮಪ್ಪನ ಗತಿ ಏನು ತಿಮ್ಮಪ್ಪನ ಕೆಳಗೆ ಶಿವ ಇರುತ್ತಾರೋ, ಶಿವನ ಕೆಳಗೆ ತಿಮ್ಮಪ್ಪನೋ ಸಂಕೇಶ್ವರನೇ ಬಲ್ಲ. ಶಿವ ಮತ್ತೆ ಎಡಿಟರ್ ಆಗಿ ಮೆರೆಯುವ ಕಾಲ ಬರಲಿ ಎಂದು ಶೈವಸ್ಥರು(ಶಿವ ಬೆಂಬಲಿಗರು) ಹರಕೆ ಹೊತ್ತಿದ್ದಾರಂತೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications