ಜ್ಯೋತಿಡೇ ಸುಪಾರಿ ಹಂತಕರು ಬೆಂಗಳೂರಿಗೂ ಬಂದಿದ್ದರು!

ಚೋಟಾ ರಾಜನ್ ಆಣತಿಯಂತೆ ರೋಹಿತ್ ತಂಗಪ್ಪನ್ ಅಲಿಯಾಸ್ ಸತೀಶ್ ಕಲ್ಯಾ ಕೊಲೆ ನಡೆಸಿದ್ದಾನೆ. ಆದರೆ ಅವನಿಗೆ ಜ್ಯೋತಿರ್ಮಯಿ ಡೇ ಅವರ ದೈಹಿಕ ವಿವರವನ್ನು ಮಾತ್ರ ನೀಡಿದ್ದ ರಾಜನ್, ಇತರ ಮಾಹಿತಿಯನ್ನು ತಿಳಿಸಿರಲಿಲ್ಲ. ಘಟನೆ ವಿವರ ಟಿ.ವಿ.ಗಳಲ್ಲಿ ಬಿತ್ತರವಾದ ನಂತರವಷ್ಟೇ ಕಲ್ಯಾ ತಂಡಕ್ಕೆ ತಾವು ಕೊಂದಿದ್ದು ಪತ್ರಕರ್ತನನ್ನು ಎಂಬುದು ತಿಳಿದುಬಂದಿತ್ತು - ಹೀಗೆಂದು ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಕಾಲ್ಯಾನಿಗೆ ಛೋಟಾ ರಾಜನ್ನಿಂದ ಜೆ.ಡೇ ಹತ್ಯೆಗೆ 20 ದಿನದ ಮೊದಲು ಫೋನ್ ಬಂದಿದೆ. ಹತ್ಯೆಗೆ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ರಾಜನ್ ಹೇಳಿದ್ದಾನೆ. ನಂತರ ಕಾಲ್ಯಾ ಚೆಂಬೂರ್ ನಲ್ಲಿ 2 ಲಕ್ಷ ರು, ಬಂದೂಕು ಹಾಗೂ 25 ಸುತ್ತಿನ ಗುಂಡುಗಳನ್ನು ಪಡೆದಿದ್ದಾನೆ. ಇವೆಲ್ಲವೂ ನೈನಿತಾಲ್ನಿಂದ ಬಂದಿವೆ.
ಅಚ್ಚರಿಯ ಸಂಗತಿಯೆಂದರೆ ಹಂತಕರಿಗೆ ತಾವು ಕೊಲ್ಲುತ್ತಿರುವುದು ಒಬ್ಬ ಪತ್ರಕರ್ತನನ್ನು ಎಂಬುದೇ ಗೊತ್ತಿರಲಿಲ್ಲ. ಏಕೆಂದರೆ ಛೋಟಾ ರಾಜನ್ ಯಾರನ್ನು ಕೊಲ್ಲಬೇಕೆಂದು ಹೇಳಿದ್ದನೇ ಹೊರತು ಅವನ ಹಿನ್ನೆಲೆಯ ಬಗ್ಗೆ ಹೇಳಿರಲಿಲ್ಲ. ಮೊದಲೇ ನಿರ್ಧರಿಸಿದ್ದಂತೆ ಕೊಲೆ ಮಾಡಿ ಜೋಗೇಶ್ವರಿಗೆ ತೆರಳಿದಾಗ ಹಂತಕರು ಟೀವಿ ನೋಡಿದ್ದಾರೆ. ಅದರಲ್ಲಿ ಖ್ಯಾತ ಪತ್ರಕರ್ತ ಜೆ.ಡೇ ಹತ್ಯೆಯ ಸುದ್ದಿ ಪ್ರಸಾರವಾಗುತ್ತಿದೆ! ಆಗಲೇ ಇವರಿಗೆ ತಾವು ಕೊಂದಿದ್ದು ಯಾರನ್ನು ಎಂಬುದು ತಿಳಿದಿದೆ. ನಂತರ ಕಾಲ್ಯಾ ರಾಜನ್ಗೆ ಫೋನ್ ಮಾಡಿ ಅಲವತ್ತುಕೊಂಡಿದ್ದಾನೆ. ಆಗ ಆತ ಇನ್ನೂ 3 ಲಕ್ಷ ರೂ. ತೆಗೆದುಕೊಂಡು ಮುಂಬೈನಿಂದ ದೂರ ಹೋಗಿ ತಲೆಮರೆಸಿಕೊಳ್ಳಿ ಎಂದು ಹೇಳಿದ್ದಾನೆ.
ಹಂತಕರಿಂದ ಪೊಲೀಸರು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲರನ್ನೂ ಸ್ಥಳೀಯ ನ್ಯಾಯಲಯಕ್ಕೆ ಹಾಜರುಪಡಿಸಿ ಜುಲೈ 4ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications