ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು: ಟೆಂಪೋ KSRTC ಬಸ್ ಢಿಕ್ಕಿ, 15 ಸಾವು

By Mahesh
|
Google Oneindia Kannada News

ತುಮಕೂರು ಜೂ 17: ತುಮಕೂರು ಹಾಗೂ ಗುಬ್ಬಿ ಮಧ್ಯೆಯ ಹೆಗ್ಗರೆಯಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ಜನ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 11 ಪುರುಷರು ಹಾಗೂ 4 ಮಹಿಳೆಯರು ಇದ್ದಾರೆ. ಸುಮಾರು 10 ಜನರು ಗಾಯಗೊಂಡಿದ್ದಾರೆ ಎಂದು ಎಸ್ ಪಿ ರಮೇಶ್ ಹೇಳಿದ್ದಾರೆ. ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಇದೇ ರೀತಿ ಅಪಘಾತಕ್ಕೆ ಬಲಿಯಾಗಿದ್ದರು.

ಹೆಗ್ಗರೆಯ ಸಿದ್ದಾರ್ಥ ಮೆಡಿಕಲ್ ಕಾಲೇಜು ಬಳಿ ಸಂಭವಿಸಿದ ಟೆಂಪೋ ಟ್ರಾಕ್ಸ್ ಹಾಗೂ ಕೆಎಸ್ಆರ್ ಟಿಸಿ ಬಸ್ ಢಿಕ್ಕಿಯಿಂದ ಟೆಂಪೋದಲ್ಲಿದ್ದ ಅಷ್ಟೂ ಜನ ಸತ್ತಿದ್ದಾರೆ. ಗಾಯಾಳುಗಳನ್ನು ಗುಬ್ಬಿ ಹಾಗೂ ತುಮಕೂರಿನ ಸರ್ಕಾರಿ ಆಸ್ಪತೆಗೆ ಸೇರಿಸಲಾಗಿದೆ. ರಸ್ತೆ ಅಪಘಾತಕ್ಕೆ ಚಾಲಕರ ನಿರ್ಲಕ್ಷ್ಯ, ಅತಿ ವೇಗದ ಚಾಲನೆ ಕಾರಣ ಇರಬಹುದು. ಆದರೆ, ರಸ್ತೆಗಳಲ್ಲಿ ಯಾವುದೇ ದೋಷಗಳಿಲ್ಲ. ಆ ಭಾಗದ ರಸ್ತೆಗಳು ಸುಸ್ಥಿತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.

ಗಾಯಾಳುಗಳಿಗೆ ಉಚಿತ ಚಿಕಿತ್ಸೆಗೆ ಏರ್ಪಾಡು ಮಾಡಲಾಗುವುದು ಹಾಗೂ ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ ನೀಡಲಾಗುವುದು ಈ ಅಪಘಾತದಲ್ಲಿ ಸರ್ಕಾರಿ ಬಸ್ ಚಾಲಕನದ್ದು ಏನು ತಪ್ಪಿಲ್ಲ. ಬಸ್ ಓವರ್ ಟೇಕ್ ಮಾಡುವಾಗ ಟೆಂಪೋ ಡ್ರೈವರ್ ನಿಯಂತ್ರಣ ಕಳೆದುಕೊಂಡು ಬಸ್ ಗೆ ಗುದ್ದಿದ್ದಾನೆ

ಈ ಭಾಗದಲ್ಲಿ ವಿಶೇಷವಾಗಿ ಮಂಡ್ಯ, ತುಮಕೂರು ಕಡೆ ಖಾಸಗಿ ವಾಹನಗಳ ಹಾವಳಿ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.

English summary
KSRTC Bus collided with overloaded Tempo Trax near Siddhartha Dental College Heggare in Gubbi Tumkuar road. Over 15 people died including 11 men and 4 women and several injured, Transport Minister R Ashok has announced 50 thousand rupees as a compensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X