ಬೆತ್ತಲೆ ಪೋಸ್ ಕೊಟ್ಟಾಗ ಇಲ್ಲದ ಭಯ, ಆಮೇಲೆ ಏಕೆ?

ಕಬ್ಬಿನಗದ್ದೆ ನಿವಾಸಿ ಯುವತಿ ಮಾತು ಆಲಿಸಿದ ಪೊಲೀಸರು, ಅಲ್ಲಮ್ಮ ಬೆತ್ತಲೆ ಫೋಸ್ ಕೊಟ್ಟಾಗ ಇಲ್ಲದ ಭಯ, ಆಮೇಲೆ ಏಕೆ ಎಂದು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಯುವತಿ, ಇಲ್ಲಾ ಸಾರ್ ಅವನು ಬಲವಂತವಾಗಿ ಎಳೆದೊಯ್ದ. ಪ್ರೀತಿ ಮಾಡ್ತೀನಿ, ಮದುವೆ ಆಗ್ತೀನಿ ಅಂದಾ ನಾನು ಎಷ್ಟು ಬೇಡ ಎಂದರೂ ಫೋಟೊ ಕ್ಲಿಕ್ಕಿಸಿಬಿಟ್ಟ ಎಂದಿದ್ದಾಳೆ.
ಯುವತಿ ನೀಡಿದ ದೂರಿನ ಮೇಲೆ ಕಂಬದಕೋಣೆ ನಿವಾಸಿ ಸುರೇಂದ್ರ ಪೂಜಾರಿ ಎಂಬಾತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ನಾಯ್ಕನಕಟ್ಟೆ ಬಳಿ ಓಮ್ನಿ ಕಾರಿನಲ್ಲಿ ನಡೆದಿರುವ ಈ ಬಲವಂತದ ಫೋಟೋ ಶೂಟ್ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications