ಇಸ್ರೋ ಉದ್ಯೋಗಿ, ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ

ರಾಮಮೂರ್ತಿ ನಗರದ ನಿವಾಸಿ ಎಂ ಚಂದ್ರಶೇಖರ್ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಅವರು ಗುರುವಾರ 7.30 ಗಂಟೆಗೆ ಕಚೇರಿ ಹಾಜರಾಗಿದ್ದರು. ಆದರೆ, ಮೊದಲ ಟೀ ವಿರಾಮ ವೇಳೆಗೆ ಅವರ ಶವ ಕಚೇರಿ ಫ್ಯಾನ್ ನಲ್ಲಿ ನೇತಾಡುತ್ತಿತ್ತು. 8.30ರ ಸುಮಾರಿಗೆ ಚಂದ್ರಶೇಖರ್ ಅವರ ಚೇಂಬರ್ ಪ್ರವೇಶಿಸಿದ ಕೆಲಸದಾಳು ನಂತರ ಎಲ್ಲರಿಗೂ ವಿಷಯ ತಿಳಿಸಿದ್ದಾರೆ.
ಪ್ರತಿದಿನ 8.30 ಕ್ಕೆ ಬರುತ್ತಿದ್ದ ಚಂದ್ರಶೇಖರ್ ಗುರುವಾರ ಒಂದು ಗಂಟೆ ಮುಂಚಿತವಾಗಿ ಕೆಲಸಕ್ಕೆ ಬಂದಿದ್ದರು. ಆತ್ಮಹತ್ಯೆಗೆ ಕಾರಣ ತಿಳಿಸುವ ಯಾವುದೇ ಪತ್ರ ಸಿಕ್ಕಿಲ್ಲ. ನಿವೃತ್ತಿ ಜೀವನವನ್ನು ಎದುರಿಸಲಾಗದೆ ಗೋಳಾಡುತ್ತಿದ್ದರು. ಮಾನಸಿಕ ಒತ್ತಡ ನಿವಾರಣೆಗಾಗಿ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು ಎಂದು ಚಂದ್ರಶೇಖರ್ ಅವರ ಪತ್ನಿ ಪರಿಮಳ ತಿಳಿಸಿದ್ದಾರೆ ಎಂದು ಜೀವನ್ ಭೀಮಾ ನಗರ ಪೊಲೀಸರು ಹೇಳಿದ್ದಾರೆ.












Click it and Unblock the Notifications