ರಾಜ್ಯ ಕಾಂಗ್ರೆಸ್ ಸಾರಥ್ಯ ಮತ್ತೆ ಕೃಷ್ಣ ಕೈಗೆ?

SM Krishna
ಬೆಂಗಳೂರು, ಜೂ 18: ಕೇಂದ್ರ ಸಚಿವ ಎಸ್ ಎಂ ಕೃಷ್ಣ ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಪ್ರಭಾವಿ ಸಮುದಾಯಗಳಾದ ಲಿಂಗಾಯಿತ, ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿಶ್ವಾಸಗಳಿಸಿ ಮುಂದಿನ ಚುನಾವಣೆಗೆ ಅನುಕೂಲಕರ ಭೂಮಿಕೆ ಸಿದ್ದಪಡಿಸಲು ಹೈಕಮಾಂಡ್ ಇಂತಹ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ದಾಖಲಾರ್ಹವೆಂದರೆ, 1999ರಲ್ಲಿ ಎಸ್ ಎಂ ಕೃಷ್ಣ KPCC ಚುಕ್ಕಾಣಿ ಹಿಡಿದಿದ್ದಾಗ ಕಾಂಗ್ರೆಸ್ ಜಯಭೇರಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸೋತು ಹೈರಾಣವಾಗಿರುವ ಪಕ್ಷಕ್ಕೆ ಚೈತನ್ಯ ತುಂಬಲು ಸೂಕ್ತ ನಾಯಕ ಎಂದರೆ ಕೃಷ್ಣ ಒಬ್ಬರೇ ಎನ್ನುವ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ.

ಅಸಮಾಧಾನಗೊಂಡ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಕೃಷ್ಣ ಹೆಗಲೇರಿದೆ. ಅಲ್ಲದೆ ಅತೃಪ್ತಿಯಲ್ಲಿ ಮುಳುಗಿರುವ ನಾಯಕರುಗಳ ಮನಸು ಹಗುರಗೊಳಿಸಿ, ಪಕ್ಷ ಸಂಘಟನೆಗೆ ಹುರಿದುಂಬಿಸುವ ಕಾಯಕವನ್ನು ಕೃಷ್ಣಗೆ ವಹಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.

ವಲಸೆ ನಾಯಕರುಗಳಿಂದ ತುಂಬಿ ಒಡೆದ ಮನೆಯಂತಾಗಿರುವ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸೆ ಕಾಂಗ್ರೆಸಿಗರ ಮಧ್ಯೆ ಭಾರೀ ಬಿರುಕು ಬಿಟ್ಟಿದ್ದು ಅಂತ ಮನಸಿಗೆ ಬೆಸುಗೆ ಹಾಕುವಂತ ದೊಡ್ಡ ಜವಾಬ್ದಾರಿಯನ್ನು ಕೃಷ್ಣ ಅವರಿಗೆ ವಹಿಸಲು ದೆಹಲಿ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+