ರಾಜ್ಯ ಕಾಂಗ್ರೆಸ್ ಸಾರಥ್ಯ ಮತ್ತೆ ಕೃಷ್ಣ ಕೈಗೆ?

ದಾಖಲಾರ್ಹವೆಂದರೆ, 1999ರಲ್ಲಿ ಎಸ್ ಎಂ ಕೃಷ್ಣ KPCC ಚುಕ್ಕಾಣಿ ಹಿಡಿದಿದ್ದಾಗ ಕಾಂಗ್ರೆಸ್ ಜಯಭೇರಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸೋತು ಹೈರಾಣವಾಗಿರುವ ಪಕ್ಷಕ್ಕೆ ಚೈತನ್ಯ ತುಂಬಲು ಸೂಕ್ತ ನಾಯಕ ಎಂದರೆ ಕೃಷ್ಣ ಒಬ್ಬರೇ ಎನ್ನುವ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ.
ಅಸಮಾಧಾನಗೊಂಡ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಕೃಷ್ಣ ಹೆಗಲೇರಿದೆ. ಅಲ್ಲದೆ ಅತೃಪ್ತಿಯಲ್ಲಿ ಮುಳುಗಿರುವ ನಾಯಕರುಗಳ ಮನಸು ಹಗುರಗೊಳಿಸಿ, ಪಕ್ಷ ಸಂಘಟನೆಗೆ ಹುರಿದುಂಬಿಸುವ ಕಾಯಕವನ್ನು ಕೃಷ್ಣಗೆ ವಹಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.
ವಲಸೆ ನಾಯಕರುಗಳಿಂದ ತುಂಬಿ ಒಡೆದ ಮನೆಯಂತಾಗಿರುವ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸೆ ಕಾಂಗ್ರೆಸಿಗರ ಮಧ್ಯೆ ಭಾರೀ ಬಿರುಕು ಬಿಟ್ಟಿದ್ದು ಅಂತ ಮನಸಿಗೆ ಬೆಸುಗೆ ಹಾಕುವಂತ ದೊಡ್ಡ ಜವಾಬ್ದಾರಿಯನ್ನು ಕೃಷ್ಣ ಅವರಿಗೆ ವಹಿಸಲು ದೆಹಲಿ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications